ಬಂಟ್ವಾಳ: ಇಲ್ಲಿಗೆ ಸಮೀಪದ ನೇರಂಬೋಳು ಶ್ರೀ ರಕ್ತೇಶ್ವರಿ ಯುವಕ ಸಂಘ  ಇದರ 19 ನೇ ವಾರ್ಷಿಕೋತ್ಸವ,ಯಕ್ಷಗುರು ಯೋಗೀಶ್ ಶರ್ಮ ಅವರಿಗೆ "ಯಕ್ಷ ಸಾಮ್ರಾಟ್" ಪ್ರಶಸ್ತಿ ಪ್ರದಾನ ಸಮಾರಂಭವು ನೇರಂಬೋಳು ಸಭಾಭವನದಲ್ಲಿ ನಡೆಯಿತು. ಪುರಸಭಾ ಸದಸ್ಯೆ ಮೀನಾಕ್ಷಿ ಜೆ. ಗೌಡ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.   ಮಾಜಿ ಸಚಿವ ಬಿ. ರಮಾನಾಥ ರೈ, ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸಂಘದ ಗೌರವಾಧ್ಯಕ್ಷ ಚಂದ್ರಹಾಸ ಟೈಲರ್, ಕಾರ್ಯದರ್ಶಿ ಮಂಜುನಾಥ ಕುಲಾಲ್ ಅತಿಥಿಗಳಾಗಿ ಭಾಗವಹಿಸಿದ್ದರು. ಸಭಾಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ದಯಾನಂದ ಕುಲಾಲ್ ನೇರಂಬೋಳ್ ವಹಿಸಿದ್ದರು.    ಮನೋಹರ ಕುಲಾಲ್ ನೇರಂಬೋಳ್ ಸ್ವಾಗತಿಸಿದರು. ರವೀಂದ್ರ ಕುಲಾಲ್ ವಂದಿಸಿದರು.  ಯೊಗೀಶ್ ಪೂಜಾರಿ ಕಾರ್ಯ ಕ್ರಮ ನಿರೂಪಿಸಿದರು. ಈ ಸಂದರ್ಭ ಯಕ್ಷಗುರುಗಳಾದ ಯೋಗೀಶ್ ಶರ್ಮ ಇವರಿಗೆ ಸಂಘದ ವತಿಯಿಂದ ಯಕ್ಷಸಾಮ್ರಾಟ್ ಎಂಬ ಬಿರುದು ನೀಡಿ ಸನ್ಮಾನಿಸಲಾಯಿತು. ನಂತರ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಂಘದ ಮಕ್ಕಳಿಂದ ಸುದರ್ಶನ ಯಕ್ಷಗಾನ ಬಯಲಾಟ ನಡೆಯಿತು.