ಉಡುಪಿ, ಏಪ್ರಿಲ್ 10: ಕರ್ನಾಟಕ ರಾಜ್ಯ ಸಾರಿಗೆ ನೌಕರರ ಒಕ್ಕೂಟ(ರಿ) ವತಿಯಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನಲೆಯಲ್ಲಿ ಕರಾರಸಾ.ನಿಗಮದ ಕುಂದಾಪುರ  ಮತ್ತು ಉಡುಪಿ ತಾಲೂಕಿನ ಆಸ್ತಿಪಾಸ್ತಿ ಮತ್ತು ವಾಹನಗಳಿಗೆ ಹಾನಿ ಉಂಟುಮಾಡಿ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ಉಂಟು ಮಾಡುವ ಸಾಧ್ಯತೆ  ಹೆಚ್ಚಾಗಿರುವುದರಿಂದ ಮುಂಜಾಗೃತಾ ಕ್ರಮವಾಗಿ , ಉಡುಪಿ ಕೆಎಸ್ ಆರ್ ಟಿಸಿ ಘಟಕ , ಪುತ್ತೂರು ಹಾಗೂ ಸಿಟಿ ಬಸ್ಸು ನಿಲ್ದಾಣ ಉಡುಪಿ  ಮತ್ತು ಕುಂದಾಪುರ ಕೆಎಸ್ ಆರ್ ಟಿಸಿ ಘಟಕ , ವಡೇರಹೋಬಳಿ ಹಾಗೂ ಕುಂದಾಪುರ ಬಸ್ಸು ನಿಲ್ದಾಣ  ಇಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಹಾಗೂ ಸಾರ್ವಜನಿಕ ಹಿತವನ್ನು ಕಾಪಾಡುವ ದೃಷ್ಟಿಯಿಂದ ಈ ಸ್ಥಳ/ಪ್ರದೇಶಗಳ ಸುತ್ತಮುತ್ತಲು 200 ಮೀ.  ವ್ಯಾಪ್ತಿಯಲ್ಲಿ ಏಪ್ರಿಲ್ 9 ರಿಂದ  ಪ್ರತಿಭಟನೆ ಕೊನೆಗೊಳ್ಳುವವರೆಗೆ  ಕಲಂ 144  ರಂತೆ ನಿಷೇದಾಜ್ಞೆಯನ್ನು ವಿಧಿಸಿ ಜಿಲ್ಲಾಧಿಕಾರಿ ಜಿ.ಜಗದೀಶ್, ಆದೇಶಿಸಿದ್ದಾರೆ.