ಒಡಿಶಾ ರಾಜಧಾನಿ ಭುವನೇಶ್ವರದಿಂದ 180 ಕಿಲೋಮೀಟರ್ ದೂರದ ಬಾಲಾಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದಲ್ಲಿ ನಡೆದ ರೈಲು ಡಿಕ್ಕಿಯಲ್ಲಿ 50ಕ್ಕೂ  ಹೆಚ್ಚು ಜನರು ಮರಣಿಸಿದರೆ, 350ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಬೆಂಗಳೂರು ಹೌಡಾ ಎಕ್ಸ್‌ಪ್ರೆಸ್‌ ರೈಲು ಬಹನಾಗಾದಲ್ಲಿ ಹಳಿ ತಪ್ಪಿ  ನಿಂತಿತ್ತು. ಹೌಡಾ ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್‌ ರೈಲು ಅದಕ್ಕೆ ಬಂದು ಡಿಕ್ಕಿ ಹೊಡೆದಿದೆ. 15 ಡಬ್ಬಿಗಳು ನುಜ್ಜುಗುಜ್ಜು ಆಗಿರುವುದರಿಂದ ಸಾವು ನೋವು ಇನ್ನೂ ಅಧಿಕ ಇರಬಹುದು ಎನ್ನಲಾಗಿದೆ. ರಕ್ಷಣಾ ಕಾರ್ಯ ಮುಂದುವರಿದಿದೆ. ಒಡಿಶಾ ರೈಲು ದುರಂತ ಸಾವು ಸಂಖ್ಯೆ 261ಕ್ಕೆ ಏರಿಕೆಯಾಗಿದೆ.