ಮಂಗಳೂರು:  ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶದ ಅಂಗವಾಗಿ ದೃಢ ಕಲಶ ಆಗಬೇಕಿರುವುದರಿಂದ ಡಿಸೆಂಬರ್ 28 ರಿಂದ ಫೆಬ್ರವರಿ 17 ರ ವರೆಗೆ ಸಾರ್ವಜನಿಕರಿಗೆ ಶ್ರೀ ದೇವರ ದರ್ಶನ ಇರುವುದಿಲ್ಲ . ಕೋವಿಡ್-19 ನಿಂದಾಗಿ ಬ್ರಹ್ಮಕಲಶೋತ್ಸವ ನಡೆದ ಬಳಿಕ ಜೀರ್ಣೋದ್ದಾರದ ಉಳಿದ ಕೆಲಸ ಮಾಡಲು ಸಾಧ್ಯವಾಗಿರಲಿಲ್ಲ, ಹೀಗಾಗಿ ದೃಢಕಲಶ ಬಾಕಿ ಇತ್ತು. 

ಪ್ರಸ್ತುತ ಸಾನಿಧ್ಯದಲ್ಲಿ ಸಣ್ಣಪುಟ್ಟ ಜೀರ್ಣೋದ್ದಾರದ ಕೆಲಸ ನಡೆಸಿ ದೃಢಕಲಶ ಮಾಡಬೇಕಾಗಿದೆ. ಹೀಗಾಗಿ ದೇವರ ದರ್ಶನ ಈ ಸಮಯದಲ್ಲಿ ಇರುವುದಿಲ್ಲ, ಈ ಅವಧಿಯಲ್ಲಿ ದೇವಸ್ಥಾನಕ್ಕೆ ಸಂಬಂಧಪಟ್ಟ ಸೀಮೆಯ ಒಳಗೆ ವಿಶೇಷ ಕಾರ್ಯಕ್ರಮ ಮಾಡುವುದಾದರೆ ದೇವರಲ್ಲಿ ಪ್ರಾರ್ಥಿಸಿ ಮುಂದುವರಿಯಬಹುದು ಎಂದು ಕ್ಷೇತ್ರದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.