ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕುಂಜತ್ತಬೈಲಿನಲ್ಲಿ ಡಾ. ವಸಂತ ಕುಮಾರ್ ಪೆರ್ಲರ ಜೊತೆಗೆ ಮನೆಯಂಗಳದಲ್ಲಿ ಮಾತುಕತೆ ಮತ್ತು ಸಾಹಿತ್ಯ ಸಂಭ್ರಮ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ. ಪಿ. ಶ್ರೀನಾಥ್‌ರ ಅಧ್ಯಕ್ಷತೆಯಲ್ಲಿ ಡಾ. ವಸಂತ ಕುಮಾರ್ ಪೆರ್ಲರು ದೀಪ ಬೆಳಗಿದರು. ಮನೆಯಂಗಳದಲ್ಲಿ ಮಾತುಕತೆಯಲ್ಲಿ ವಿಜಯಲಕ್ಷ್ಮಿ ಕಟೀಲು, ರಘು ಇಡ್ಕಿದು, ಸಾವಿತ್ರಿ ಪೂರ್ಣಚಂದ್ರ, ಪ್ರಶಾಂತಿ ಶೆಟ್ಟಿ, ಕೃಷ್ಣ ಭಟ್, ಕೃಷ್ಣಮೂರ್ತಿ ಸಂವಾದದಲ್ಲಿ ಬದುಕನ್ನು ಬಿಡಿಸಿಟ್ಟರು, ಹಿಡಿದಿಟ್ಟರು.

ಗ್ರಾಮೀಣ ಬದುಕು ಮತ್ತು ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ಶ್ರೀಪಾದ ಕೃಷ್ಣ ರೇವಣಕರ್ ದತ್ತಿ ಉಪನ್ಯಾಸ ನಡೆಯಿತು. ಡಾ. ಮಂಜುನಾಥ ಅವರು ಅಧ್ಯಕ್ಷತೆ ವಹಿಸಿದ್ದರು. ಬಾಲಕೃಷ್ಣ ಶೆಟ್ಟಿ ಕಟೀಲು ಅವರು ಅಂಚೆ ಪೇದೆ ದಿವಂಗತ ರೇವಣಕರ್‌ರ ಕನ್ನಡ ಸೇವೆಯ ಬಗೆಗೆ ಮಾತನಾಡಿದರು.

ಕೊನೆಯದಾಗಿ ನಡೆದ ಕವಿಗೊಟ್ಟಿಯ ಅಧ್ಯಕ್ಷತೆಯನ್ನು ಡಾ. ರಘುರಾಮ್ ಬಯ್ಕಂಪಾಡಿ ವಹಿಸಿದ್ದರು. ಮೀನಾಕ್ಷಿ ರಾಮಚಂದ್ರ, ಬಾಲಕೃಷ್ಣ ಭಾರದ್ವಾಜ್, ಗಂಗಾಧರ ಶೆಟ್ಟಿ, ಶಾರದಾ ಎಸ್. ಶೆಟ್ಟಿ, ಅಕ್ಷಯ ಶೆಟ್ಟಿ, ಬದ್ರುದ್ದೀನ್ ಕೂಳೂರು, ಸಮಂಗಲಾ ನಾಯ್ಕ್, ಪ್ರಮೀಳಾ ದೀಪಕ್, ಶೈಲಾ ಕುಮಾರಿ, ಚಂದ್ರಶೇಖರ ಅಂತರ, ದಿವಾ ಕೊಕ್ಕಡ ಕವನಗಳನ್ನು ಓದಿದರು.