ಉಡುಪಿ,(ಆಗಸ್ಟ್, 24):   ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ  ಬಿ.ಎ/ಬಿಕಾಂ. ಪೂರಕ ಮತ್ತು ಎಂ.ಬಿ ಎ ಸೆಮಿಸ್ಟರ್ ಪರೀಕ್ಷೆಗಳನ್ನು  ಪೆಬ್ರವರಿ/ಮಾಚ್೯ ಮಾಹೆಯಲ್ಲಿ ದಿನಾಂಕ 13.03.2020 ರವರೆಗೆ  ನಡೆಸಲಾಗಿದ್ದು ಕೋವಿಡ್ 19 ರ ಸಂಕ್ರಾಮಿಕ ರೋಗದಿಂದಾಗಿ ಸರ್ಕಾರದ ನಿರ್ದೇಶನದಂತೆ ಉಳಿದ ಪರೀಕ್ಷೆಗಳನ್ನು ಮುಂದೂಡಲಾಗಿತ್ತು.

   ಮುಂದೂಡಲಾದ ಪರೀಕ್ಷೆಗಳನ್ನು ಯುಜಿಸಿ ಯ ಮಾರ್ಗ ಸೂಚನೆಯಂತೆ  ಮತ್ತು ಉನ್ನತ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಸೆಪ್ಟಂಬರ್ 1  ರಿಂದ ಹಾಗೂ ಎಂ.ಬಿಎ ಸೆಮಿಸ್ಟರ್ ಪರೀಕ್ಷೆಗಳನ್ನು ಸೆಪ್ಟಂಬರ್ 5 ರಿಂದ ಉಡುಪಿಯ ಎಂ.ಜಿ.ಎo ಕಾಲೇಜಿನಲ್ಲಿ ನಡೆಸಲಾಗುತ್ತದೆ. 

    ವೇಳಾ ಪಟ್ಟಿಯನ್ನು  ವಿಶ್ವ ವಿದ್ಯಾನಿಲಯದ ವೆಬ್ ಸೈಟ್ http://www.ksoumysuru.ac.in  ಪ್ರಕಟಿಸಲಿದ್ದು,  ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಹಾಜರಾಗುವಂತೆ ಉಡುಪಿ ಪ್ರಾದೇಶಿಕ ನಿರ್ದೇಶಕರಾದ ಡಾ.ಕೆ.ಪಿ.ಮಹಾಲಿಂಗಯ್ಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.