ಹೆಬ್ರಿ : ಹೆಬ್ರಿ ತಾಲ್ಲೂಕು ವ್ಯಾಪ್ತಿಯ ವಿವಿಧ ಗೇರು ಬೀಜದ ಕಾರ್ಖಾನೆಗೆ ತೆರಳಿ ಶುಕ್ರವಾರ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಮತಯಾಚನೆ ಮಾಡಿದರು.

ಹೆಬ್ರಿಯ ವಿವಿಧ ಗೇರು ಬೀಜದ ಕಾರ್ಖಾನೆಯಲ್ಲಿ ಪ್ರಮೋದ್ ಮಧ್ವರಾಜ್ ಮತಯಾಚನೆ.

ಮೋದಿಯಿಂದಾಗಿ ಗೇರುಬೀಜ ಕಾರ್ಖಾನೆಗಳು ಸಂಕಷ್ಟದಲ್ಲಿ : ಪ್ರಮೋದ್ ಮಧ್ವರಾಜ್

ಮನಮೋಹನ ಸಿಂಗ್ ಸರ್ಕಾರದ ಅವಧಿಯಲ್ಲಿ ಕಾರ್ಮಿಕ ಮಹಿಳೆಯರ ಕೈಯಲ್ಲಿ ಹಣ ಇತ್ತು. ನೆಮ್ಮದಿ ಇತ್ತು, ಮತ್ತೇ ಬಂದ ನರೇಂದ್ರ ಮೋದಿಯಿಂದಾಗಿ ಇಂದು ಮಹಿಳೆಯರು ಕಣ್ಣೀರು ಹಾಕುವ ದಿನಗಳು ಬಂದಿದೆ. ವಿಪರೀತ ಜಿಎಸ್‍ಟಿ ತೆರಿಗೆಯ ಹೇರಿಕೆ ಮತ್ತು ನೋಟು ರದ್ಧತಿಯಿಂದಾಗಿ ನಮ್ಮ ಜಿಲ್ಲೆಯ ಬಹುತೇಕ ಗೇರು ಬೀಜದ ಕಂಪೆನಿಗಳು ಮುಳುಗುವ ಹಂತಕ್ಕೆ ತಲುಪಿದ್ದು ಮಾಲಕರು ಕಾರ್ಮಿಕರಿಗೆ ಕೆಲಸ ಕೊಡುವ ಸ್ಥಿತಿಯಲ್ಲಿ ಇಲ್ಲ ಎಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದರು.

ಹೆಬ್ರಿ ತಾಲ್ಲೂಕು ವ್ಯಾಪ್ತಿಯ ವಿವಿಧ ಗೇರು ಬೀಜದ ಕಾರ್ಖಾನೆಗೆ ತೆರಳಿ ಶುಕ್ರವಾರ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಮತಯಾಚನೆ ಮಾಡಿ ಮಾತನಾಡಿದರು.

ಪ್ರ - ಮೋದಿಗೆ ಓಟು ಕೊಡಿ ಬಿಜೆಪಿಯವರು ನಿಮ್ಮಲ್ಲಿ ಮೋದಿಗೆ ಓಟು ಕೊಡಿ ಎಂದು ಕೇಳುತ್ತಾರೆ. ಮೋದಿ ಓಟಿಗೆ ನಿಂತದ್ದು ದೂರದ ವಾರಣಾಸಿಯಲ್ಲಿ, ನಿಮ್ಮ ಸಮಸ್ಯೆಯನ್ನು, ನಿಮ್ಮ ಕೆಲಸದ ಮೋದಿಯಲ್ಲಿ ಹೇಳಲು ಆಗಲ್ಲ, ನನ್ನ ಹೆಸರಿನಲ್ಲೂ ಮೋದಿ ಇದೆ, ನೀವು ಹತ್ತಿರದ ಪ್ರ - ಮೋದಿಗೆ ಓಟು ಕೊಡಿ. ಗ್ರಾಮ ಪಂಚಾಯಿತಿ ಸದಸ್ಯನಂತೆ ನಿಮ್ಮ ಕೆಲಸ ಮಾಡುತ್ತೇನೆ. ನನ್ನ ಮೇಲೆ ವಿಶ್ವಾಸ ಇಡಿ ಇಂದು ಪ್ರಮೋದ್ ಮನವಿ ಮಾಡಿದರು.

ಮೋದಿಗೆ ಜನ ಸಾಮಾನ್ಯರು ಬೇಡ : ದೇಶದಲ್ಲಿ ಬಹುತೇಕ ಕಂಪೆನಿಗಳು ಮುಚ್ಚುವ ಹಂತಕ್ಕೆ ಮೋದಿಯಿಂದಾಗಿ ತಲುಪಿವೆ, ಕಾರ್ಮಿಕರನ್ನು ಕೆಲಸದಿಂದ ಬಿಡುತ್ತಿದ್ದಾರೆ, ಇದು ಬಿಜೆಪಿಯವರಿಗೂ ಗೊತ್ತಿದೆ, ಆದರೆ ಅವರು ಬಾಯಿ ಬಿಡುವ ಸ್ಥಿಯಲ್ಲಿಲ್ಲ, ಮೋದಿಗೆ ಜನಸಾಮಾನ್ಯರು ಬೇಡ, ಅಂಬಾನಿ ಮತ್ತು ಅದಾನಿ ಮಾತ್ರ ಬೇಕಾಗಿದ್ದು. ಮೋದಿ ಪ್ರದಾನಿಯಾಗುವ ಮೊದಲು ಅಂಬಾನಿ ಆಸ್ತಿ ಮೌಲ್ಯ 16 ಲಕ್ಷ ಕೋಟಿ ಇತ್ತು ಈಗ 31 ಲಕ್ಷ ಕೋಟಿ ಆಗಿದೆ. ನಮ್ಮ ಹಣವನ್ನು ಮೋದಿ ಪರೋಕ್ಷವಾಗಿ ಅವರಿಬ್ಬರಿಗೆ ವರ್ಗಾಯಿಸಿದ್ದಾರೆ ಎಂದು ಪ್ರಮೋದ್ ಮಧ್ವರಾಜ್ ಆರೋಪಿಸಿದರು. ಯುಪಿಎ ಸರ್ಕಾರ 350 ರೂಪಾಯಿಗೆ ಒಂದು ಸಿಲಿಂಡರ್ ನಂತೆ ನಾಲ್ಕು ಸಿಲಿಂಡರ್ ಗ್ಯಾಸ್ ನೀಡುತ್ತಿತ್ತು. ಮೋದಿ ಬಂದ ಗ್ಯಾಸ್ ಬೆಲೆ 900 ರೂಪಾಯಿ ಆಗಿದೆ ಎಂದರು.

ನಾನು ಎಂಪಿಯಾದರೆ ಮರಳು ಸಮಸ್ಯೆಗೆ ಹೊಸ ಕಾನೂನು  ಪ್ರಮೋದ್ ಮಧ್ವರಾಜ್.

ಮರಳು ಸಮಸ್ಯೆ ಹೆಚ್ಚಾಗಲು ಕೇಂದ್ರ ಸರ್ಕಾರ ಕಾರಣ, ನಾನು ಎಂಪಿ ಆದರೆ ಕೇಂದ್ರ ಸರ್ಕಾರದಲ್ಲಿ ಜಿಲ್ಲೆಯ ಮರಳು ಜಿಲ್ಲೆಯ ಜನತೆಗೆ ಸಿಗಲು ಹೊಸ ಕಾನೂನು ಮಾಡಿ ಎಲ್ಲರಿಗೂ ಸುಲಭದಲ್ಲಿ ಮರಳು ಸಿಗುವಂತೆ ಮಾಡುತ್ತೇನೆ ಎಂದರು.

ಖಜಾನೆ, ಶಿವಪುರ, ಕನ್ಯಾನ, ಚಾರ, ಹೆಬ್ರಿ ಸೇರಿದಂತೆ ಹಲವು ಗೇರು ಬೀಜದ ಕಂಪೆನಿಗಳಿಗೆ ಬೇಟಿ ನೀಡಿ ಪ್ರಮೋದ್ ಮಧ್ವರಾಜ್ ಮತಯಾಚನೆ ಮಾಡಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಗೋಪಾಲ ಭಂಡಾರಿ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ, ಕಾಂಗ್ರೆಸ್ ನಾಯಕ ನೀರೆ ಕೃಷ್ಣ ಶೆಟ್ಟಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಉದಯ ಕುಮಾರ ಶೆಟ್ಟಿ,ಹೆಬ್ರಿಯ ಎಚ್.ಜನಾರ್ಧನ್,  ಆರೀಫ್ ಕಲ್ಲೋಟ್ಟೆ, ಎಚ್.ನರೇಂದ್ರ ನಾಯಕ್,ಜೆಡಿಎಸ್ ಕಾರ್ಯಧ್ಯಕ್ಷ ಶ್ರೀಕಾಂತ್ ಪೂಜಾರಿ  ಸೇರಿದಂತೆ ಪಕ್ಷದ ಸ್ಥಳೀಯ ಮುಖಂಡರು ಹಾಜರಿದ್ದರು.