ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಉಳ್ಳಾಲ ನೂತನ ಘಟಕ ಕಚೇರಿಯ ಉದ್ಥಾಟನಾ ಸಮಾರಂಭವು ದಿನಾಂಕ : 04-10-2020 ರ ಭಾನುವಾರದಂದು ಸಂತ ಸೆಬಾಸ್ಟಿಯನ್ ಹಿರಿಯ ಪ್ರಾಥಮಿಕ ಶಾಲೆ(ಆಡಂ ಕುದ್ರು) ಇಲ್ಲಿ ಸಂಜೆ 4.30 ಗಂಟೆ ಜರುಗಲಿದೆ. ಈ ಕಾರ್ಯಕ್ರಮದ ಅತಿಥಿಗಳಾಗಿ ಸನ್ಮಾನ್ಯ ಯು.ಟಿ. ಖಾದರ್, ಮಾಜಿ ಸಚಿವರು, ಹಾಲಿ ಶಾಸಕರು ಮಂಗಳೂರು ವಿಧಾನಸಭಾ ಕ್ಷೇತ್ರ, ವೇದವ್ಯಾಸ ಕಾಮತ್, ಶಾಸಕರು, ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ಮತ್ತು ಶ್ರೀ ರಂಜಿತ್ ಕುಮಾರ್ ಬಂಡಾರೂ, ಐಪಿಎಸ್, ಸಹಾಯಕ ಆಯುಕ್ತರು, ದಕ್ಷಿಣ ವಿಭಾಗ ಇವರು ಭಾಗವಹಿಸಲಿದ್ದಾರೆ.
ಡಾ|| ಮುರಲೀಮೋಹನ್ ಚೂಂತಾರು, ಜಿಲ್ಲಾ ಸಮಾದೇಷ್ಟರು ಗೃಹರಕ್ಷಕ ದಳ, ಚೀಫ್ ವಾರ್ಡನ್ ಪೌರರಕ್ಷಣೆ ದಕ್ಷಿಣ ಕನ್ನಡ ಜಿಲ್ಲೆ ಇವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಗೌರವ ಉಪಸ್ಥಿತರಾಗಿ ಶ್ರೀಮತಿ ವೀಣಾ ಮಂಗಳ, ಮಹಾನಗರಪಾಲಿಕೆ ಸದಸ್ಯೆ ಜಪ್ಪಿನಮೊಗರು 54ನೇ ವಾರ್ಡ್ ಮತ್ತು ಕ್ಲೇರಾ ವೇಗಸ್, ಮುಖ್ಯೋಪಾಧ್ಯಾಯಿನಿ, ಸಂತ ಸೆಬಾಸ್ಟಿಯನ್ ಹಿರಿಯ ಪ್ರಾಥಮಿಕ ಶಾಲೆ, ಆಡಂಕುದ್ರು ಇವರು ಭಾಗವಹಿಸಲಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀಮೋಹನ್ ಚೂಂತಾರು ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.