ಮಂಗಳೂರು: ಅಧಿಕ ಮಾಸ ಪ್ರಯುಕ್ತ ಕೊಂಚಾಡಿ ಶ್ರೀ ಕಾಶಿ ಮಠದಲ್ಲಿ 3 ದಿನಗಳ ಪರ್ಯಂತ ನಡೆದ ಸುಮಧ್ವ ವಿಜಯ ಪಾರಾಯಣ ಹಾಗೂ ವ್ಯಾಖ್ಯಾನ ಕಾರ್ಯಕ್ರಮ ನಡೆದು ಬಳಿಕ ಇಂದು ಪಂಚ ಪ್ರಾಣ ಸೂಕ್ತಮ್ ಹವನ ಮಹಾ ಪೂರ್ಣಾಹುತಿ ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ನೆರವೇರಿತು . ಸುಮಧ್ವ ವಿಜಯ ಪಾರಾಯಣ ಹಾಗೂ ವ್ಯಾಖ್ಯಾನ ವು ಪಂಡಿತ್ ನರಸಿಂಹ ಆಚಾರ್ಯರಿಂದ ಶ್ರೀ ದೇವಳದಲ್ಲಿ 2 ದಿನಗಳ ಪರ್ಯಂತ ನಡೆಯಿತು .
ಈ ಸಂದರ್ಭದಲ್ಲಿ ಕೊಂಚಾಡಿ ಕಾಶಿ ಮಠದ ವ್ಯವಸ್ಥಾಪಕ ಸಮಿತಿಯ ವಾಸುದೇವ್ ಕಾಮತ್ , ರತ್ನಕರ್ ಕಾಮತ್, ಉರ್ವಿ ರಾಧಾಕೃಷ್ಣ ಶೆಣೈ , ಪ್ರಶಾಂತ್ ಪೈ ಉಪಸ್ಥಿತರಿದ್ದರು .