ಬಂಟ್ವಾಳ್ : ರೋಟರಿ ಕ್ಲಬ್ ಬಂಟ್ವಾಳ್ ಟೌನ್ ಮತ್ತು ರೋಟರಿ ಕ್ಲಬ್ ಬಂಟ್ವಾಳ್ ಲೊರೆಟ್ಟೊ ಹಿಲ್ಸ್ ಜಂಟಿಯಾಗಿ ಸಾರ್ವಜನಿಕರಿಗೆ ಮಧುಮೇಹ ತಪಾಸಣಾ ಶಿಬಿರವನ್ನು ಬಿಸಿರೋಡಿನ ಬಸ್ ತಂಗುದಾಣದಲ್ಲಿ ಆಯೋಜಿಸಿದ್ದರು. ವೆನ್ ಲಾಕ್ ಆಸ್ಪತ್ರೆಯ ಕಣ್ಣಿನ ವೈದ್ಯರಾದ ಡಾ. ರಾಧಾಕೃಷ A.N. ಶಿಬಿರವನ್ನು ಉದ್ಘಾಟಿಸಿದರು, ರೋಟರಿ ಕ್ಲಬ್ ಬಂಟ್ವಾಳ್ ಟೌನ್ ನ ಅಧ್ಯಕ್ಷರಾದ ರೊ ಜಯರಾಜ್ ಎಸ್ ಬಂಗೇರ ಎಲ್ಲರನ್ನು ಸ್ವಾಗತಿಸಿದರು, ಉಜಿರೆಯ ಅರೋಗ್ಯ ಇಲಾಖೆಯ ಲ್ಯಾಬ್ ಟೆಕ್ನಿಷನ್ ವೈ ವೆಂಕಟೇಶ್ ಸಾರ್ವಜನಿಕರ ಮಧುಮೇಹ ತಪಾಸಣೆ ನಡೆಸಿದರು, Rt ಶಾಂತ್ ರಾಜ್ ಕಾರ್ಯಕ್ರಮ ಸಂಯೋಜಿಸಿದರು. ಲೊರೆಟ್ಟೊ ಹಿಲ್ಸ್ ಕ್ಲಬ್ ನ ಅಧ್ಯಕ್ಷರಾದ Rt. ಪದ್ಮರಾಜ್ ಬಲ್ಲಾಳ್, ಸೆಕ್ರೆಟರಿ ಗಳಾದ Rt. ಪಲ್ಲವಿ ಕಾರಂತ್, ಶ್ರುತಿ ಮಾಡ್ತಾ , ಆನ್ಸ್ ಅಧ್ಯಕ್ಷೆ ರೊ. ವಿಂಧ್ಯ ಎಸ್ ರೈ ಮತ್ತು ಎರಡೂ ಕ್ಲಬ್ ಗಳ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.ಹಲವಾರು ಸಾರ್ವಜನಿಕರು ಶಿಬಿರದ ಪ್ರಯೋಜನವನ್ನು ಪಡೆದರು.