ಮಂಗಳೂರು: ಮಾಧ್ಯಮ ರಂಗದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಹಿರಿಯ ಪತ್ರಕರ್ತ  ರವಿರಾಜ್ ವಳಲಂಬೆ ಮಂಗಳವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಉಡುಪಿಯಲ್ಲಿ ಈಟಿವಿ ವರದಿಗಾರನಾಗಿ ಹಲವು ವರ್ಷಗಳ ಸೇವೆ ಸಲ್ಲಿಸಿದ್ದ ರವಿರಾಜ್ ಬಳಿಕ ಸುವರ್ಣವಾಹಿನಿಯಲ್ಲಿ ವರದಿಗಾರರಾಗಿ ದುಡಿದಿದ್ದರು. ಆನಂತರ ಉಡುಪಿಯ ಪ್ರೈಮ್ ಟಿ.ವಿ. ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರ ಅನಿರೀಕ್ಷಿತ ಅಗಲುವಿಕೆ ನೋವು ತಂದಿದೆ. ರವಿರಾಜ್ ವಳಲಂಬೆ ನಿಧನಕ್ಕೆ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದು:ಖವನ್ನು ತಡೆಯುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಪ್ರಾರ್ಥಿಸುತ್ತೇವೆ.