ಮಂಗಳೂರು :06.09.2019 ಶುಕ್ರವಾರದಂದು ರಾತ್ರಿ 9:30ಕ್ಕೆ ಸರಿಯಾಗಿ ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾಗಲಿರುವ ಶ್ರೀಧರ ಯಕ್ಷಕಾವ್ಯ ಸರಣಿ ತಾಳಮದ್ದಲೆಯ ಪ್ರಥಮ ಹಂತವಾಗಿ ಧರ್ಮಸ್ಥಳ ಬಿ. ಭುಜಬಲಿ ಮತ್ತು ಬಳಗದವರಿಂದ ಕವಿ ಶ್ರೀಧರ ಡಿ.ಎಸ್. ರಚಯಿತ “ಶುಕ್ರಸಂಜೀವಿನಿ” ಪ್ರಸಂಗದಿಂದ ಆಯ್ದ “ಭೃಗುಶಾಪ” ಎಂಬ ಪುರಾಣ ಕಥಾನಕದ ತಾಳಮದ್ದಲೆ ಕಾರ್ಯಕ್ರಮ ಪ್ರಸಾರವಾಗಲಿದೆ.
ತಂಡದಲ್ಲಿ ಹಿಮ್ಮೇಳದಲ್ಲಿ ದಿನೇಶ ಅಮ್ಮಣ್ಣಾಯ, ಬಿ. ಸೀತಾರಾಮ ತೋಳ್ಪಾಡಿತ್ತಾಯ, ಬಿ. ಜನಾರ್ದನ ತೋಳ್ಪಾಡಿತ್ತಾಯ ಹಾಗೂ ಮುಮ್ಮೇಳದಲ್ಲಿ ಉಜಿರೆ ಆಶೋಕ ಭಟ್, ಕೊಳ್ತಿಗೆ ನಾರಾಯಣ ಗೌಡ, ನಿಡ್ಲೆ ಗೋವಿಂದ ಭಟ್, ಜನಾರ್ದನ ಗುಡಿಗಾರ, ಮನೋಹರ ಕುಮಾರ್, ಬೇಗಾರು ಶಿವಕುಮಾರ್, ಈಶ್ವರ ಪ್ರಸಾದ, ಧರ್ಮಸ್ಥಳ ಭಾಗವಹಿಸಿರುತ್ತಾರೆ.