ಮಂಗಳೂರು:ಜಾಗತಿಕ ತಲ್ಲಣಗಳನ್ನು ಸೃಷ್ಟಿಸಿ ಇಡೀ ಮನುಕುಲವನ್ನು ಬೆಚ್ಚಿ ಬೀಳಿಸಿರುವ ಕೊರೋನ ವೈರಸ್ ಔಷಧಿ ಇಲ್ಲದಿರುವುದನ್ನು ನಮಗೆಲ್ಲ ತಿಳಿದಿರುವ ವಿಚಾರವಾಗಿದೆ. ಈ ಕೊರೋನಾ ವೈರಸ್ಗೆ ಮದ್ದು ಕಂಡುಹಿಡಿಯುವವರೆಗೆ ಪ್ರತಿಯೊಬ್ಬರು ಅಗತ್ಯ ಮುನ್ನೆಚ್ಚರಿಕೆಯೊಂದಿಗೆ ರೋಗನಿರೋಧಕ ಶಕ್ತಿಯನ್ನು ವೃದ್ದಿಸಿಕೊಳ್ಳುವುದು ಅಗತ್ಯ ಹಾಗು ಅನಿವಾರ್ಯ ಆಗಿದೆ.
ಈ ಹಿನ್ನಲೆಯಲ್ಲಿ ಕಳೆದ 60 ವರ್ಷಗಳಿಂದ ನಡೆಸುತ್ತಿರುವ ಮಂಗಳೂರಿನ ಹೆಸರಾಂತ ಕಿಟ್ಸ್ ಫಾರ್ಮಸುಟಿಕಲ್ ವರ್ಕ ಸಂಸ್ಥೆಯು ಇಮ್ಯುನೋ ಕಿಟ್ಸ್ ಎಂಬ ಹೊಸ ಉತ್ಪನ್ನವೊಂದನ್ನು ಪರಿಚಯಿಸುತ್ತಿದೆ. ಈ ಉತ್ಪನ್ನವನ್ನು ಕೊರೋನ ಲಾಕ್ಡೌನ್ ಸಂದರ್ಭದಲ್ಲಿ ನಿರಂತರ 60 ದಿನಗಳ ಕಾಲ ಹರಿಹರ ಪಾಂಡುರಂಗ ಭಜನಾ ಮಂದಿರದ ಕೇಂದ್ರಿತವಾಗಿ ಕೊರೋನಾ ವಾರಿಯಸ್ರ್ ಗಳ ಸೇವೆಯ ಕಾರ್ಯಕರ್ತರಾಗಿ ಕಿಟ್ಸ್ ಸಂಸ್ಥೆಯು ಉಚಿತವಾಗಿ ನೀಡಿತು, ಮತ್ತು ಅವರೊಂದಿಗೆ ಜೋಡಿಸಿ ಇಮ್ಯುನೋ ಕಿಟ್ಸ್ ಹರ್ಬಲ್ ಟೀಯನ್ನು ಉಚಿತವಾಗಿ ಅವರು ನೀಡುವ ಆಹಾರದೊಂದಿಗೆ ಪ್ರಾಯೋಗಾತ್ಮಕವಾಗಿ ವಿತರಿಸಿದ್ದರು.
ಹರ್ಬಲ್ ಟೀಯನ್ನು 40 ದಿನಗಳಿಗಿಂತಲೂ ಹೆಚ್ಚು ದಿನ ಸೇವಿಸಿದ ಪೊಲೀಸ್ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು, ಹಾಗೂ ಸಂಸ್ಥೆಯ ಗ್ರಾಹಕರಿಂದ ಮೆಚ್ಚುಗೆಯು ವ್ಯಕ್ತವಾಗಿರುವದರೊಂದಿಗೆ ಮತ್ತಷ್ಟು ಬೇಡಿಕೆ ಬಂದಿರುವ ಕಾರಣ ಸಂಸ್ಥೆಯು ಜನಮಾನಸಕ್ಕೆ ಈ ಉತ್ಪನ್ನವನ್ನು ಪರಿಚಯಿಸಲು ಮುಂದಾಗಿದೆ.
ಈ ಉತ್ಪನ್ನವು ತುಳಸಿ, ದಾಲ್ಚಿನಿ, ಅರಶಿನ, ಹಿಪ್ಪಲಿ, ಶುಂಠಿ, ಕರಿಮೆಣಸಿನ ಔಷಧೀಯ ಅಂಶಗಳಿಂದ ಸಮೃದ್ದವಾಗಿದ್ಧು ನರಗಳಿಗೆ ಶಕ್ತಿಯನ್ನು ತುಂಬಿ ಒತ್ತಡವನ್ನು ನಿವಾರಣೆ ಮಾಡಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಯಾವುದೇ ವಯೋಮಾನದವರು ಇದನ್ನು ಸೇವಿಸಬಹುದಾಗಿದ್ದು ಚಹಾ ಕಾಫಿಗೆ ಇದನ್ನು ಪರ್ಯಾಯವಾಗಿ ಬಳಸಬಹುದಾಗಿದೆ.
ಆಯುಷ್ ಇಲಾಖೆಯ ನಿಯಮಕ್ಕೆ ಅರ್ಜಿಯನ್ನು ಸಲ್ಲಿಸಿ ಅದಕ್ಕೆ ಸಂಬಂಧಪಟ್ಟ ತಜ್ಞರ ವರದಿಯನ್ನು ನೀಡಿ ಮತ್ತು ಸೇವಿಸಿದವರ ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ದಿಯಾಗಿರುವ ವರದಿ ಸಂಗ್ರಹಿಸಿ ಇಲಾಖೆಗೆ ನೀಡಿದ ಪರಿಣಾಮ ಇಲಾಖೆ ಇದನ್ನು ಪರಿಗಣಿಸಿ ಔಷದಿ ತಯಾರಿಸಲು ಅನುಮತಿ ನೀಡಿದ್ದಾರೆ.
ಇಮ್ಯುನೋ ಕಿಟ್ಸ್ ಬಿಡುಗಡೆ ಸಮಾರಂಭದಲ್ಲಿ ರಾಮಕೃಷ್ಣ ಮಠದ ಅಧ್ಯಕ್ಷರಾದ ಶ್ರೀ ಶ್ರೀ ಶ್ರೀಜಿತಕಾಮಾನಂದ ಸ್ವಾಮೀಜಿ, ಬೆನಕ ಹೆಲ್ತ್ ಸೆಂಟರ್ ಮಡಿಕೇರಿಯ ಆರ್ಯುವೇದ ತಜ್ಞ ಡಾಕ್ಟರ್ ಉದಯಶಂಕರ್, ಮಂಗಳೂರಿನ ಡಾಕ್ಟರ್ ನಿಶಾಂತ ಪೈ ,ಪಾಂಡುರಂಗ ಭಜನಾ ಮಂದಿರದ ಅಶ್ವಿತ್ ಉಪ್ಪಳ ,ಮಾಜಿ ಕರ್ಪೊರೇಟರ್ ಚಂದ್ರಕಾಂತ್, ಸಂಸ್ಥೆಯ ತಾಂತ್ರಿಕ ಸಿಬ್ಬಂದಿ ಡಾ.ಮೋಹನ್ ಕಿಶೋರ್, ಉಪಸ್ಥಿತರಿದ್ದರು.