ಮಂಗಳೂರು: ವಿಶ್ವಕರ್ಮ ಸಹಕಾರ ಬ್ಯಾಂಕಿನ 44 ನೇ ವಾರ್ಷಿಕ ಸಾಮ್ಯಾನ ಸಭೆಯಲ್ಲಿ ಆನಂದ ಆಚಾರ್ಯ, ರಾಜೇಶ್ ಬಾಳಿಗಾ ಬಿ, ಬೆನೆಡಿಕ್ಟ ಪಿಂಟೊ ಮತ್ತು ಗೋಪಾಲಕೃಷ್ಣ ಬಿ ಕುಂದರ್ ಇವರಿಗೆ ಉತ್ತಮ ಗ್ರಾಹಕ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಹರೀಶ್ ಆಚಾರ್, ಉಪಾಧ್ಯಕ್ಷರು, ನಿರ್ದೇಶಕರುಗಳು ಮತ್ತು ಪ್ರಧಾನ ವ್ಯವಸ್ಥಾಪರಾದ ಸುರೇಶ್ ಕುಮಾರ್ ಬಿ ಹಾಗೂ ಶಾಖಾ ವ್ಯವಸ್ಥಾಪಕರಾದ ಯಶೋದ ಎಂ ಉಪಸ್ಥಿತರಿದ್ದರು.