ಮುಂಬಯಿ : ಮಂಗಳೂರು ಮೂಲ್ಕಿ ಇಲ್ಲಿನ ಡಾ| ಹರಿಶ್ಚಂದ್ರ ಪಿ.ಸಾಲ್ಯಾನ್ ಅವರು ತುಳುನಾಡಿನ ಭೂತಾರಾಧನೆ ಹಾಗೂ ತುಳುನಾಡಿನ ಕಟ್ಟು ಕಟ್ಟಲೆಯ ಬಗ್ಗೆ ಅಧ್ಯಯನ ಮಾಡಿ ಕೃತಿಗಳನ್ನು ರಚಿಸಿರುವುದಲ್ಲದೆ ಪತ್ರಿಕೆಗಳಲ್ಲಿ ಅಂಕಣ ಬರಹದಲ್ಲಿ ಪ್ರಕಟವಾಗಿರುತ್ತದೆ. ಇದನ್ನು ಪರಿಗಣಿಸಿ ತುಳುನಾಡ ಸೇವಾ ಸಮಾಜ (ರಿ.) ಮೀರಾ-ಭಾಯಂದರ್ ಇವರು ಸೈಂಟ್ ಥೋಮಸ್ ಚರ್ಚ್ ಸಭಾಂಗಣದಲ್ಲಿ ದಿನಾಂಕ 28-7-2019ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ `ತುಳು ಜಾನಪದ ಸಂಶೋಧಕ ಪ್ರಶಸ್ತಿ' ಯನ್ನು ಪ್ರದಾನ ಮಾಡಲಿದ್ದಾರೆ. ಡಾ| ಹರಿಶ್ಚಂದ್ರ ಪಿ.ಸಾಲ್ಯಾನ್ ಅವರ ಮದುಮದಿಪು ನುಡಿಕಟ್ಟು ಜನಪ್ರೀಯವಾಗಿ ಇದು ಎಂಟು ಬಾರಿ ಮುದ್ರಣ ಗೊಂಡಿದೆ.