ಮುಂಬಯಿ : ಕಳೆದ 33ವರ್ಷಗಳಿಂದ ಭಾರತ್ ಬ್ಯಾಂಕ್ ನಲ್ಲಿ ಸೇವೆ ಸಲ್ಲಿಸುತ್ತಿದ್ದು ಇದೀಗ ಬ್ಯಾಂಕ್ ನ ಬಾಂಡುಪು ವಿಲೇಜ್ ಶಾಖೆಯಲ್ಲಿ ಹಿರಿಯ ಪ್ರಭಂದಕರಾಗಿ ಸೇವೆ ಸಲ್ಲಿಸುತ್ತಿದ್ದ ಸೆವಾನಿವೃತ್ತರಾಗಿದ್ದು ಜ. 31ರಂದು ಇವರನ್ನು ಗೌರವಿಸಿ ವಿದಾಯವನ್ನು ನೀಡುವ ಕಾರ್ಯಕ್ರಮವು ಬ್ಯಾಂಕಿನ ಗೋರೆಗಾಂವ್ ಕೇಂದ್ರ ಕಚೇರಿಯಲ್ಲಿ ಜರಗಿತು.

ಈ ಸಮಾರಂಭದಲ್ಲಿ ಭಾರತ್ ಬ್ಯಾಂಕ್ ನ ಆಡಳಿತ ನಿರ್ದೇಶಕ ಸಿ. ಆರ್. ಮೂಲ್ಕಿ, ಮುಖ್ಯ ಮಹಾ ಪ್ರಭಂದಕ ವಿದ್ಯಾನಂದ ಎಸ್ ಕರ್ಕೇರ, ಇತರ ಉನ್ನತಾಧಿಕಾರಿಗಳಾದ ದಿನೇಶ್ ಬಿ. ಸಾಲ್ಯಾನ್, ನಿತ್ಯಾನಂದ ಎಸ್. ಕಿರೋಡಿಯನ್, ವಾಸುದೇವ ಎಂ ಸಾಲ್ಯಾನ್, ವಿಶ್ವನಾಥ ಜಿ ಸುವರ್ಣ, ಮಹೇಶ್ ಬಿ. ಕೋಟ್ಯಾನ್ ಹಾಗೂ ಬ್ಯಾಂಕಿನ ಇತರ ಹಿರಿಯ ಅಧಿಕಾರಿಗಳು, ಪ್ರಭಂಧಕರು, ಉಪಪ್ರಭಂದಕರು, ಸಿಬ್ಬಂದಿಗಳು ಉಪಸ್ಥಿತರಿದ್ದು ಜಯಂತ್ ಎನ್ ಪೂಜಾರಿಯವರಿಗೆ ಶುಭ ಹಾರೈಸಿದರು.