ಬದುಕಿನೆಲ್ಲಾ ಬಯಕೆಯ

ಬದಿಗೊತ್ತಿ ಬಾಳುವ ಯೋಧ

ತನ್ನವರ ಖುಷಿಗಾಗಿ ಮಾಡುವ

ಯುದ್ಧ ಮನದೊಳಗೊರಗೆ ಸದಾ


ನಿದಿರೆ-ಹಸಿವು-ದಣಿವುಗಳರಿವು

ಇಲ್ಲದಂತೆ ಕಾಣುವ ಸೈನಿಕ

ಬಲಿದಾನಕೆ ಬೆದರದೇ ಮುನ್ನುಗುವ

ಅವನೇ ದೇಶದ ಪ್ರಗತಿಗೆ ನಿಜಕಾರಕ


ಬಂದೂಕು ಹಿಡಿದ ಆತ

ಶತ್ರುಗಳಿಗೆ ನಿಜ ಅಸುರ

ಅವನ ನೆರಳಡಿಯಲ್ಲಿರುವವರಿಗೆ

ಅವ ದೇವಲೋಕದ ಸುರ


ಮಾಗಿದ ಮನಸ್ಸು