ಹೆಬ್ರಿ : ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿಯ ಪ್ರಣಾಳಿಕೆಯ ಸಂಕಲ್ಪ ಪತ್ರದಲ್ಲಿ ರೈತರ ಪರವಾಗಿ ಕಾಳಜಿ ವಹಿಸಿ ಯೋಜನೆಯನ್ನು ಪ್ರಕಟಿಸಿರುವುದಕ್ಕೆ ಉಡುಪಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಮುಟ್ಲುಪಾಡಿ ಸತೀಶ ಶೆಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ. ಕೃಷಿ, ಹೈನುಗಾರಿಕೆ, ರೈತರಿಗೆ,ನೀರಾವರಿ ಮತ್ತು  ಮೀನುಗಾರಿಕೆಗೆ ಹೆಚ್ಚಿನ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಕಿಸಾನ್ ಕ್ರೆಡಿಟ್ ಕಾರ್ಡು ಮೂಲಕ 5 ವರ್ಷದ ವರೆಗೆ 1 ಲಕ್ಷ ರೂಪಾಯಿ ಬಡ್ಡಿ ರಹಿತ ಸಾಲ, 60 ಮೇಲ್ಪಟ್ಟ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಮಾಸಿಕ ಪಿಂಚಣಿ, ಈಗಾಗಲೇ ಘೋಷಿಸಿರುವ ಕಿಸಾನ್ ಸಮ್ಮಾನ್ ರೈತರಿಗೆ 6 ಸಾವಿರ ರೂಪಾಯಿ ನೀಡಲಿದ್ದಾರೆ ಎಂದು ತಿಳಿಸಿದ ಮುಟ್ಲುಪಾಡಿ ಸತೀಶ ಶೆಟ್ಟಿ ಕೃಷಿ ಉತ್ಪನ್ನಗಳ ಮೇಲೆ ಬೆಂಬಲ ಬೆಲೆ ನೀಡುವ ಕಾರ್ಯಕ್ರಮ, ಕೃಷಿ ಮತ್ತು ಗ್ರಾಮಾಣಭಿವೃದ್ಧಿ ಯೋಜನೆಗಳಿಗೆ 5 ವರ್ಷದಲ್ಲಿ 25 ಲಕ್ಷ ಕೋಟಿ ರೂಪಾಯಿ ನೀಡುತ್ತಾರೆ ಎಂದು ಸತೀಶ ಶೆಟ್ಟಿ ತಿಳಿಸಿದ್ದಾರೆ.