ಮುಂಬಯಿ:  ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಅಧ್ಯಕ್ಷ ಡಾ| ರಾಜಶೇಖರ್ ಆರ್. ಕೋಟ್ಯಾನ್ ಅವರ ಮಾತೃಶ್ರೀ ಸಾಂತೂರು ಗರಡಿಮನೆ ಕಲ್ಯಾಣಿ ಆರ್.ಪೂಜಾರಿ (78) ಅವರು  ಇಂದಿಲ್ಲಿ ಸೋಮವಾರ ನಿಧನರಾದರು.

ಮೂಲತ ಉಡುಪಿ ಮುದರಂಗಡಿ ಸಾಂತೂರು ಕೊಡಂಗಲ ಗರಡಿ ಮನೆತನದವರಾಗಿದ್ದು, ಮೂವರು ಸುಪುತ್ರ,  ಓರ್ವ ಸುಪುತ್ರಿ, ಅಪಾರ  ಬಂಧು ಮಿತ್ರರನ್ನು ಅಗಲಿದ್ದಾರೆ.