ಮುಂಬಯಿ: ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಅಧ್ಯಕ್ಷ ಡಾ| ರಾಜಶೇಖರ್ ಆರ್. ಕೋಟ್ಯಾನ್ ಅವರ ಮಾತೃಶ್ರೀ ಸಾಂತೂರು ಗರಡಿಮನೆ ಕಲ್ಯಾಣಿ ಆರ್.ಪೂಜಾರಿ (78) ಅವರು ಇಂದಿಲ್ಲಿ ಸೋಮವಾರ ನಿಧನರಾದರು.
ಮೂಲತ ಉಡುಪಿ ಮುದರಂಗಡಿ ಸಾಂತೂರು ಕೊಡಂಗಲ ಗರಡಿ ಮನೆತನದವರಾಗಿದ್ದು, ಮೂವರು ಸುಪುತ್ರ, ಓರ್ವ ಸುಪುತ್ರಿ, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.