ಜಾರ್ಖಂಡ್‌ನ ಧನಬಾದ್‌ನ ಜೋರಗಾತಕ ಪ್ರದೇಶದ ಬಹುಮಹಡಿ ಕಟ್ಟಡದಲ್ಲಿ ಮಂಗಳವಾರ ಇರುಳು ಬೆಂಕಿ ಅವಘಡ ಸಂಭವಿಸಿದ್ದು ಮೂವರು ಮಕ್ಕಳ ಸಹಿತ 14 ಮಂದಿ ಸಾವು ಕಂಡಿದ್ದಾರೆ.

40 ಅಗ್ನಿಶಾಮಕ ವಾಹನಗಳು ಕಾರ್ಯನಿರತವಾಗಿವೆ. ಕಟ್ಟಡವು ಹೊಗೆಯಿಂದ ತುಂಬಿ ಹೋಗಿದೆ. ಇನ್ನೂ ಹಲವರು ಕಟ್ಟಡದ ಒಳಗೆ ಇರುವುದು ಗೊತ್ತಾಗಿದೆ, ಕಾರ್ಯಾಚರಣೆ ಮುಂದುವರಿದಿದೆ ಎಂದು ಡಿಸಿಪಿ ಸಂದೀಪ್ ಸಿಂಗ್ ತಿಳಿಸಿದರು. 14 ಸುಟ್ಟು ಕರಕಲಾದ ಶವಗಳು ಸಿಕ್ಕಿವೆ. ಸುಟ್ಟ ಗಾಯಕ್ಕೀಡಾದ 11 ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಸುಖದೇವ್ ಸಿಂಗ್ ತಿಳಿಸಿದರು.