ಬಂಟ್ವಾಳ/ಬೆಳ್ತಂಗಡಿ, ಜು.4: ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬೆಳ್ತಂಗಡಿ ತಾಲೂಕಿನ ಎಲ್ಲಾ ಶಾಲೆಗಳಿಗೆ ತಹಶೀಲ್ದಾರ್ ಹಾಗೂ ಬ್ಲಾಕ್ ಶಿಕ್ಷಣಾಧಿಕಾರಿ (ಬಿಇಒ) ರಜೆ ಘೋಷಿಸಿದ್ದಾರೆ.


ಬೆಳ್ತಂಗಡಿ ತಹಶೀಲ್ದಾರ್/ಬಿಇಒ ತಮ್ಮ ಹೇಳಿಕೆಯಲ್ಲಿ, “ಪ್ರೀತಿಯ ಪೋಷಕರೇ ಮತ್ತು ವಿದ್ಯಾರ್ಥಿಗಳೇ, ನಿರಂತರ ಮಳೆಯಿಂದಾಗಿ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ, ಏಕೆಂದರೆ ಹೆಚ್ಚಿನ ವಿದ್ಯಾರ್ಥಿಗಳು ತೋಡು, ಕೆರೆಗಳನ್ನು ದಾಟಬೇಕಾಗಿದೆ. ಪೋಷಕರೇ, ದಯವಿಟ್ಟು ನಿಮ್ಮ ಮಕ್ಕಳು ಜಲಮೂಲಗಳಿಗೆ ಪ್ರವೇಶಿಸದಂತೆ ನೋಡಿಕೊಳ್ಳಿ.

ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬಂಟ್ವಾಳದ ಶಾಲೆಗಳಿಗೂ ರಜೆ ನೀಡಲಾಗಿದೆ.