ಲೊರೆಟ್ಟೊ ಮಾತಾ ಚರ್ಚಿನಲ್ಲಿ  ಲವ್ದತೊಸಿ ಭಾನುವಾರವನ್ನು ಸಸಿ ನೆಡುವ ಮೂಲಕ ಆಚರಣೆ ಮಾಡಲಾಯಿತು.ಚರ್ಚ್ ಪರಿಸರ ಆಯೋಗ, ಕಥೊಲಿಕ್ ಸಭಾ , ಐಸಿವೈಎಂ, ವೈಸಿಎಸ್ ಇವರ ಜಂಟಿ ಆಶ್ರಯದಲ್ಲಿ ಈ ಕಾರ್ಯಕ್ರಮ ನೆರವೇರಿತು. 
ವೈಸಿಎಸ್ ಸಂಘದ ಸದಸ್ಯರು ಬೀದಿ ನಾಟಕದ ಮೂಲಕ ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸಿದರು. ಗುರುಗಳು ತಮ್ಮ ಸಂದೇಶದಲ್ಲಿ ಪ್ರಸ್ತುತ ಯುಗ ಪರಸರ ಸಂರಕ್ಷಣೆ ಮತ್ತು ನನ್ನ ಜವಾಬ್ದಾರಿಯ ಬಗ್ಗೆ ವಿವರಿಸಿದರು.
ಚರ್ಚ್ ಧರ್ಮ ಗುರುಗಳಾದ ವಂ. ಫ್ರಾನ್ಸಿಸ್ ಕ್ರಾಸ್ತ, ಲೊರೆಟ್ಟೊ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ವಂ. ಜೈಸನ್ ಮೊನಿಸ್ , ತೋಟಗಾರಿಕಾ ಇಲಾಖೆ ಬಂಟ್ವಾಳ ಇದರ ನಿರ್ದೇಶಕರಾದ  ಜ್ಯೋ ಪ್ರದೀಪ್ ಡಿಸೋಜ, ಚರ್ಚ್ ಪಾಲನ ಮಂಡಳಿಯ ಪದಾಧಿಕಾರಿಗಳು 
ಸಿಪ್ರಿಯಾನ್ ಡಿಸೋಜ, ಶೈಲಾ ಬರ್ಬೋಜಾ, ಪ್ರಕಾಶ್ ವಾಸ್, ರಾಯಾನ್ ರೊಡ್ರಿಗಸ್, ಸ್ನೇಹಲ್, ಪ್ರಿಮಾಲ್ಹಾ, ಡಾ. ರೀಮಾ, ಆ್ಯಶಲ್ ಎಲ್ಲ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.