ಮೂಡುಬಿದಿರೆ: ಕೆ.ಸಿ.ಇ.ಟಿ ಆರ್ಕಿಟೆಕ್ಚರಲ್ ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಪದವಿ ಪೂರ್ವ ಕಾಲೇಜಿನ 8 ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಅರ್ಹತೆ ಪಡೆದು ಸಾಧನೆ ಮಾಡಿದ್ದಾರೆ. ಆ ಮೂಲಕ ಆಳ್ವಾಸ್ ಈ ಬಾರಿಯೂ ಉನ್ನತ ಸಾಧನೆ ಮಾಡಿದೆ.

ಸಾನ್ವಿ ಗುರುಮೂರ್ತಿ ಬೇವಿನಕಟ್ಟಿ 30ನೇ ರ್ಯಾಂಕ್ ಗಳಿಸಿದರೆ, ಪೂರ್ವಿ ವಿ. ಧಾರೇಶ್ವರ್ 91, ನಂದಿತ ರವಿ ಕರೆನ್ನವರ್ 97, ಪ್ರಪುಲ್ ರಾಜ್ ಜಿ.ಆರ್ 205, ಯಶ್ವಂತ್ ಕೆ. 322, ಪ್ರಾರ್ಥನಾ ಎಸ್. ಗೌಡ 326, ರುಕ್ಮಿಣಿ ನಾಯರ್ 333, ಅಲ್ ಫಾಯಿಝಿಯಾ 452ನೇ ರ್ಯಾಂಕ್‍ನೊಂದಿಗೆ ತೇರ್ಗಡೆ ಹೊಂದಿದ್ದಾರೆ.

ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ  ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅಭಿನಂದಿಸಿದ್ದಾರೆ.