ಕಿನ್ನಿಗೋಳಿ: ಸುರಗಿರಿ ಶ್ರೀ ಮಹಾಲಿಂಗೇಶ್ವರ  ದೇವಸ್ಥಾನದಲ್ಲಿ ನಡೆದ ಭಜನಾ ಮಂಗಳೋತ್ಸವವನ್ನು ದೇವಸ್ಥಾನದ ಮುಕ್ತೇಸರ ಸೀತಾರಾಮ ಶೆಟ್ಟಿ ದುರ್ಗಾದಯಾ ನೆರವೇರಿಸಿದರು. ಒಂದು ತಿಂಗಳ ಕಾಲ ನಿರಂತರ ನಗರ ಸಂಕೀರ್ತನೆಯೊಂದಿಗೆ ಶನಿವಾರ ದೇವಳದಲ್ಲಿ ಭಜನಾ ಮಂಗಳೋತ್ಸವ ನಡೆಯಿತು, ಬೆಳಿಗ್ಗೆ ದೇವಳದಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ, ಅತ್ತೂರು ಅರಸುಕುಂಜಿರಾಯ ದೈವಸ್ಥಾನಕ್ಕೆ ತೆರಳಿ ಅಲ್ಲಿ ಪ್ರಾರ್ಥನೆ ಮಾಡಿ ನಂತರ ಭಜನಾ ಮಂಗಳೋತ್ಸವ ಪ್ರಾರಂಭವಾಯಿತ. 

ಮಂಗಳೋತ್ಸವದಲ್ಲಿ ವಿವಿಧ ಭಜನಾ ತಂಡಗಳು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಸುರಗಿರಿ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ವಿಶ್ವೇಶರ ಭಟ್, ಅತ್ತೂರು ಅರಸು ಕುಂಜಿರಾಯ ದೈವಸ್ಥಾನದ ಅಧ್ಯಕ್ಷ ಚರಣ್ ಜೆ ಶೆಟ್ಟಿ ಕೊಜಪಡಿ ಬಾಳಿಕೆ,  ಧನಂಜಯ ಶೆಟ್ಟಿಗಾರ್ ಸಾಗರಿಕಾ, ರಮನಾಥ ಶೆಟ್ಟಿ ಅತ್ತೂರು, ಸುನೀಲ್ ಭಂಡಾರಿ ಕೆಮ್ರಾಲ್ ಗುತ್ತು,  ಸುರಗಿರಿ ಯುವಕ ಮಂಡಲದ ಅಧ್ಯಕ್ಷ ಅಜಯ್ ಶೆಟ್ಟಿ, ಕಾರ್ಯದರ್ಶಿ ಪ್ರಜ್ವಲ್ ಶೆಟ್ಟಿ ಸಂಘದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.