ಮಂಗಳೂರು ಮಹಾನಗರಪಾಲಿಕೆ ಸೇರಿದ ಹಲವು ಸ್ಥಳಗಳಲ್ಲಿ ಅಬಕಾರಿ ಅಧಿಕಾರಿಗಳುದಾಳಿ ನಡೆಸಿದ್ದು, ಸ್ಟೇಟ್‍ಬ್ಯಾಂಕ್ ಬಸ್ ಸ್ಟಾಂಡ್ ಸಮೀಪಖಾಸಗಿ ಬಸ್‍ಗಳಲ್ಲಿ ಕಂಡಕ್ಟರ್‍ಗಳಾಗಿ ಕೆಲಸಮಾಡುವ ಇಬ್ಬರು ವ್ಯಕ್ತಿಗಳು ಸೇರಿದಂತೆ ಒಟ್ಟು ಮೂವರು ವ್ಯಕ್ತಿಗಳನ್ನು ಮಾದಕದ್ರವ್ಯ ಸೇವನೆ ಮಾಡುವ ಸಂದರ್ಭದಲ್ಲಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.

ಮಂಗಳೂರು  ಅಬಕಾರಿ ಉಪವಿಭಾಗ- 1 ರಉಪ ಅಧೀಕ್ಷಕಿ ಗಾಯತ್ರಿ ಅವರ ಮಾರ್ಗದರ್ಶನದಲ್ಲಿ, ನಿರೀಕ್ಷಕ ಮ್ಯಾಥ್ಯು ಕಾರ್ಲೋ ಹಾಗೂ ಉಪನಿರೀಕ್ಷಕ ಸುರೇಂದ್ರ ದಾಳಿಯಲ್ಲಿ ಭಾಗವಹಿಸಿದ್ದರು.