ಮೂಡುಬಿದಿರೆ:  ಮೂಡು ಮಾರ್ನಾಡು ಸರಕಾರಿ ಪ್ರೌಢಶಾಲಾ 9ನೇ ತರಗತಿ ವಿದ್ಯಾರ್ಥಿ ರಾಷ್ಟ್ರಮಟ್ಟದ ಓಟದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾನೆ. ಬೆಂಗಳೂರಿನ ಎಚ್ ಸಿ ಎಲ್ ಫೌಂಡೇಶನ್ ಅವರು ಆಂಧ್ರ ಪ್ರದೇಶದ ಗುಂಟೂರಿನಲ್ಲಿ  ದಕ್ಷಿಣ ಭಾರತ ಮಟ್ಟದ ಅಂತರ ರಾಜ್ಯ ಸ್ಪರ್ಧೆಯನ್ನು ಆಯೋಜಿಸಿದ್ದರು.  ದಕ್ಷಿಣ ಭಾರತ ವಲಯದ 2024 ರ ಚಾಂಪಿಯನ್ ಶಿಪ್ ಸ್ಪರ್ಧೆಯನ್ನು ಗುಂಟೂರಿನ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ಸಂಘಟಿಸಿದ್ದರು.

ಗುಂಟೂರಿನಲ್ಲಿ ನಡೆದ ಈ  ಸ್ಪರ್ಧೆಯಲ್ಲಿ 600 ಮೀಟರ್ ಓಟದ ಸ್ಪರ್ಧೆಯಲ್ಲಿ ದಕ್ಷಿಣ ಭಾರತ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಆಯ್ಕೆ ಗೊಂಡವರು ಮೂಡು ಮಾರ್ನಾಡು ಸರಕಾರಿ ಪ್ರೌಢಶಾಲಾ 9ನೇ ತರಗತಿಯ ವಿದ್ಯಾರ್ಥಿ ಸುಮಂತ್ ಎಸ್ ಇವರು. ಕೆಲ್ಲಪುತ್ತಿಗೆ ನಿವಾಸಿ ಶೇಖರ ಪೂಜಾರಿ ಹಾಗೂ  ಮೋಹಿನಿ ಅವರ ಸುಪುತ್ರನಾಗಿರುವ ಸುಮಂತ್ ಎಸ್ ಇವರು 8ನೇ ತರಗತಿಯಲ್ಲಿದ್ದಾಗ ಕೂಡಾ ಬೆಂಗಳೂರಿನ ಹೆಚ್ ಸಿ ಎಲ್ ಫೌಂಡೇಶನ್ ಅವರೇ ತುಮಕೂರಿನಲ್ಲಿ ನಡೆಸಿದ್ದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ 600 ಮೀಟರ್ ಓಟದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದನ್ನು ಇಲ್ಲಿ ಸ್ಮರಿಸಿಕೊ ಳ್ಳಬಹುದು.

ವರದಿ: ರಾಯಿ ರಾಜಕುಮಾರ್ ಮೂಡುಬಿದಿರೆ.