ಸಾಮಾಜಿಕ ಜಾಲ ತಾಣಗಳಲ್ಲಿ ಸಮಾಜವನ್ನು ತಿರುಚುವ ಮತ್ತು ಕಂಗೆಡಿಸುವ ಚಿತ್ರಣಗಳದೇ ರಾಜ್ಯಭಾರ ನಡೆದಿದೆ. ಅದು ಸಮಾಜಕ್ಕೆ ಹೊರೆ ಹೊರತು ಸೂಕ್ತ ಅಲ್ಲ ಎಂದು ಕನ್ನಡ ನಟ ಶಿವರಾಜಕುಮಾರ್ ಹೇಳಿದರು.

ಪತ್ನಿ ಗೀತಾ ಅವರು ಶಿವಮೊಗ್ಗದ ಕಾಂಗ್ರೆಸ್ ಅಭ್ಯರ್ಥಿಯಾಗಿರುವುದರಿಂದ ಇತ್ತೀಚೆಗೆ ಬಹುತೇಕ ಶಿವಮೊಗ್ಗ ಜಿಲ್ಲೆಯಲ್ಲೇ ಅವರು ಇದ್ದಾರೆ. ಜಾಲ ತಾಣಗಳಲ್ಲಿ ಟೀಕೆ ಬಂದರೆ ಸರಿ. ಆದರೆ ‌ಸುಳ್ಳುಗಳು, ಆಚೀಚೆ ಕತ್ತರಿಸಿದ ಸುದ್ದಿಗಳು, ಮನುಷ್ಯ ಸಂಬಂಧಗಳಿಗೆ ಹುಳಿ ಹಿಂಡುವ ಸುದ್ದಿಗಳು ಬರುತ್ತಿವೆ. ಇವೆಲ್ಲ ಖಂಡನೀಯ. ಮಾಧ್ಯಮ ಪ್ರಪಂಚ ಇವನ್ನೆಲ್ಲ ತಿದ್ದುವಂತೆ ಕಾಣುತ್ತಿಲ್ಲ ಎಂದೂ ಅವರು ಬೇಸರ ವ್ಯಕ್ತಪಡಿಸಿದರು.