ಉಡುಪಿ:  ಮೇ 10 ಮತ್ತು 11 ರಂದು 2 ದಿನಗಳ ಕಾಲ ಕರಾವಳಿ ಜಂಕ್ಷನ್ ನಿಂದ ಮಲ್ಪೆಯವರೆಗೆ ರಾಷ್ಟ್ರೀಯ ಹೆದ್ದಾರಿ 169A ರಸ್ತೆ ಅಗಲಿಕರಣ ದುರಸ್ತಿ, ಕೆಲಸ ನಡೆಯುತ್ತಿರುವುದರಿಂದ ಕರಾವಳಿ ಜಂಕ್ಷನ್ ನಿಂದ ಮಲ್ಪೆಯವರೆಗೆ ರಸ್ತೆ ಬದಿ ತೆರವು ಕಾರ್ಯಚರಣೆ ನಡೆಯುವುದರಿಂದ ಕರಾವಳಿ ಜಂಕ್ಷನ್ ನಿಂದ ಮತ್ತೆ ಮಲ್ಪೆಯವರೆಗೆ ಬೆಳಿಗ್ಗೆ 08:00 ಗಂಟೆಯಿಂದ ಸಂಜೆ 06:00 ಗಂಟೆ ವರೆಗೆ ಏಕಮುಖ ಸಂಚಾರ ವ್ಯವಸ್ಥೆಯನ್ನು (One Way) ಮಾಡಲಾಗಿರುತ್ತದೆ, 

ಆದುದರಿಂದ ಮಲ್ಪೆ, ಮಲ್ಪೆ ಬಂದರು, ಮಲ್ಪೆ ಬೀಚ್ ನಿಂದ ಉಡುಪಿ ಕಡೆಗೆ ಹೋಗುವ ಮೀನು ತುಂಬಿರುವ ವಾಹನ, ಭಾರಿ ಗಾತ್ರದ ವಾಹನ , ಲಘು ವಾಹನ ಹಾಗೂ ಪ್ರವಾಸಿಗರು ಮಲ್ಪೆ ಜಂಕ್ಷನ್ ನಿಂದ ಸಿಟಿಜನ್ ಸರ್ಕಲ್ ಮಾರ್ಗವಾಗಿ ಕೊಡವೂರು-ಲಕ್ಷ್ಮಿನಗರ ಕ್ರಾಸ್- ಲಕ್ಷ್ಮೀನಗರ ಜಂಕ್ಷನ್- ಆಶಿರ್ವಾದ ನಗರ ಮಾರ್ಗದಿಂದ ರಾಷ್ಟ್ರೀಯ ಹೆದ್ದಾರಿ ತಲುಪಿ ಉಡುಪಿ ಕಡೆಗೆ ಸಂಚರಿಸುವುದು, ಹಾಗೂ ದ್ವಿಚಕ್ರ ವಾಹನ ಮತ್ತು ಲಘು ವಾಹನಗಳು ಮಲ್ಪೆ ಜಂಕ್ಷನ್ ನಿಂದ ಕಲ್ಮಾಡಿ ಜಂಕ್ಷನ್, ಕಿದಿಯೂರು, ಕಡೆಕಾರ್ ನಿಂದ ಕನ್ನರ್ಪಾಡಿ ದೇವಸ್ಥಾನ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ತಲುಪಿ ಉಡುಪಿ ಕಡೆಗೆ ಸಂಚರಿಸುವುದು,

ಮಾರ್ಗ 1: ಮಲ್ಪೆ ಜಂಕ್ಷನ್→ ಸಿಟಿಜನ್ ಸರ್ಕಲ್ →ಕೊಡವೂರು→ ಲಕ್ಷ್ಮೀನಗರ ಕ್ರಾಸ್ →ಲಕ್ಷ್ಮಿನಗರ ಜಂಕ್ಷನ್ →ಆರ್ಶಿವಾದ ನಗರ→ ಉಡುಪಿ ರಾಷ್ಟ್ರೀಯ ಹೆದ್ದಾರಿ,

ಮಾರ್ಗ 2: ಮಲ್ಪೆ ಜಂಕ್ಷನ್→ ಕಲ್ಮಾಡಿ ಜಂಕ್ಷನ್ →ಕಿದಿಯೂರು→ ಕಡೆಕಾರ್ →ಕನ್ನರ್ಪಾಡಿ ದೇವಸ್ಥಾನ ಮಾರ್ಗವಾಗಿ ಉಡುಪಿ ಕಡೆಗೆ ಸಂಚರಿಸುವುದು.