ಇಡಿ- ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಡಿ. ಕೆ. ಶಿವಕುಮಾರ್ ಮೇಲೆ ಚಾರ್ಜ್ಶೀಟ್ ಸಲ್ಲಿಸಿದೆ. ಬಿಜೆಪಿ ಸೇರಲು ನನ್ನ ಮೇಲೆ ಒತ್ತಡ ಹೇಳಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿದರು.
2019ರಲ್ಲಿ ಡಿ. ಕೆ. ಶಿವಕುಮಾರ್ ಕುಮಾರ್ ಮೇಲೆ ಇಡಿ ದಾಳಿ ನಡೆದಿತ್ತು. ಅವರ ಬಂಧನವೂ ಆಗಿತ್ತು. ಅವರು ದಿಲ್ಲಿ ಉಚ್ಚ ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ.
40% ಕಮಿಶನ್ ಬಿಜೆಪಿಯ ಮೇಲೆ ಆಪಾದನೆ ಮಾಡಿ ಬಿಜೆಪಿಯವರೇ ಆತ್ಮಹತ್ಯೆ ಮಾಡಿಕೊಂಡರು. ಪಿಎಸ್ಐ ಅಕ್ರಮ ಇನ್ನಿತರ ಅಕ್ರಮಗಳಲ್ಲಿ ಇಡಿ ಏಕೆ ದಾಳಿ ಮಾಡಿಲ್ಲ ಎಂದು ಶಿವಕುಮಾರ್ ಪ್ರಶ್ನಿಸಿದ್ದಾರೆ.