ಮಂಗಳೂರು: ಎಸ್.ಎಸ್.ಎಲ್.ಸಿ.ಯಲ್ಲಿ 99% ಅಂಕವನ್ನು ಪಡೆದು, ಸೈಂಟ್ ಮೇರಿಸ್ ಪಳ್ನೀರ್ ಹೈಸ್ಕೂಲಿನಲ್ಲಿ ಟಾಪರ್ ಆಗಿ ಮೂಡಿ ಬಂದ ವೆಲೆನ್ಸಿಯಾದ ವಿದ್ಯಾರ್ಥಿನಿ  ಅಂಡ್ರಿಯಾ ವಿವಲ್ ತೋರಸ್ ಇವರನ್ನು ಸನ್ಮಾನಿಸಿ, ಮಾತನಾಡಿದ ಮಾಜಿ ಶಾಸಕ ಮತ್ತು ವಿಧಾನ ಪರಿಷತ್ ಮುಖ್ಯ ಸಚೇತಕರಾದ ಐವನ್ ಡಿ ಸೋಜ ಇವರು ವಿದ್ಯೆ ಕಸಿದುಕೊಳ್ಳಲಾಗದಂತ ಸೊತ್ತಾಗಿದ್ದು, ವಿದ್ಯೆ ಪಡೆದು ಸಮಾಜದಲ್ಲಿ ಜನರ ಸೇವೆಯೊಂದಿಗೆ ಗೌರವವನ್ನು ಪಡೆಯುವಂತಾಗಬೇಕು ಎಂದು ಅಭಿನಂದನಾ ಸಮಾರಂಭದಲ್ಲಿ ನುಡಿದರು.

ಇತ್ತೀಚಿನ ದಿನಗಳಲ್ಲಿ ವಿದ್ಯೆಗೆ ಇರುವ ಮಹತ್ವವು ಅತ್ಯಂತ ಪ್ರಮುಖವಾಗಿ ಪ್ರತಿಬಿಂಬಿಸುತ್ತಿದ್ದು, ಎಲ್ಲಾ ತರದ ವೃತ್ತಿಯಲ್ಲಿಯೂ ಪರಿಶ್ರಮ ಮತ್ತು ಶ್ರದ್ಧೆಯಿಂದ ಯಾವುದನ್ನೂ ಸಾಧಿಸಬಹುದು ಎಂಬುದು ಖಾತರಿಯಾಗಿದೆ. ಪ್ರತಿಯೊಂದು ವಿಭಾಗದಲ್ಲಿಯೂ ಅನೇಕ ಅವಕಾಶಗಳು ಮೂಡಿಬರುತ್ತಿದ್ದು, ಅವಕಾಶಗಳನ್ನು ಪಡೆಯಲು ಕಠಿಣ ಪರಿಶ್ರಮ ಅಗತ್ಯವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಶ್ರಮ ಪಟ್ಟಾಗ ಇಂತಹ ಪರಿಶ್ರಮ ಪಡೆಯಲು ಸಾಧ್ಯ ಎಂದು ಐವನ್ ಡಿ ಸೋಜರವರು ನುಡಿದರು. 

ಈ ಸಂದರ್ಭದಲ್ಲಿ ಎ.ಜೆ. ಆಸ್ಪತ್ರೆಯ ಪ್ರಸೂತಿ ಮತ್ತು ತಜ್ಞರಾದ ಕವಿತಾ ಡಿ ಸೋಜ, ಅಂಡ್ರಿಯಾ ವಿವಲ್ ತೋರಸ್‍ರವರ ತಂದೆ ಅನಿಲ್ ತೋರಸ್ ಮತ್ತು ವಿದ್ಯಾ ತೋರಸ್, ಹಿರಿಯರಾದ ಮೊಂತುಲೋಬೊ, ಮಾಜಿ ಕಾರ್ಪೊರೇಟರ್ ಗಳಾದ ನಾಗೇಂದ್ರ ಕುಮಾರ್, ಸಬಿತಾ ಮಿಸ್ಕಿತ್, ಭಾಸ್ಕರ್ ರಾವ್, ಮನುರಾಜ್,  ಮಹೇಶ್ ಕುಮಾರ್, ಅಬಿಬುಲ್ಲ, ಸಿ.ಮುಸ್ತಫ, ಸಲೀಂ ಮುಕ್ಕ, ಸತೀಶ್ ಪೆಂಗಲ್, ಜೇಮ್ಸ್ ಪ್ರವೀಣ್, ಆಲಿಸ್ಟನ್ ಡಿ ಕುನ್ಹಾ, ಜೇಮ್ಸ್ ಮಾರ್ತ ಮುಂತಾದವರು ಉಪಸ್ಥಿತರಿದ್ದರು.