ಶನಿವಾರ ಮೇ 28ರಂದು ಕರಾವಳಿ ಲೇಖಕಿಯರ ವಾಚಕಿಯರ ಸಂಘದಲ್ಲಿ ಪರಮೇಶ್ವರಿ ಲೋಕೇಶ್ವರ್ ಸಾಹಿತ್ಯ ಮತ್ತು ಸಂಸ್ಕರಣೆ ಕಾರ್ಯಕ್ರಮವು ಸೊಗಸಾದ ರೀತಿಯಲ್ಲಿ ನಡೆಯಿತು.

ದಿವಂಗತ ಲೇಖಕಿ ಪರಮೇಶ್ವರಿ ಲೋಕೇಶ್ವರಿ ಅವರ ಮಗಳಾದ ವಿಜಯಲಕ್ಷ್ಮಿ ಶ್ಯಾನುಭಾಗ್ ಅವರು ಮಾತನಾಡಿ ಬದುಕಿನ ಜಂಜಾಟದ ನಡುವೆ ಆತ್ಮವಿಶ್ವಾಸದ ಸಾಹಿತ್ಯ ರಚಿಸಿದವರು. ಎಲ್ಲ ಪ್ರಕಾರದಲ್ಲಿ ಬರೆದ ನಮ್ಮ ತಾಯಿ ಮನೆಯನ್ನೇ ಲೈಬ್ರೆರಿ ಮಾಡಿಕೊಂಡು ಜ್ಞಾನದ ಹಾದಿಯಲ್ಲಿ ಎಲ್ಲರಿಗೆ ಅಚ್ಚು ಮೆಚ್ಚಾದವರು. ನಾನೂ ಅವರಿಂದಾಗಿಯೇ ಲೇಖಕಿ ಆದೆ ಎಂದೂ ಅವರು ಹೇಳಿದರು.

ಲೇಖಕಿ ಎ. ಪಿ. ಮಾಲತಿಯವರಿಂದ ಉದ್ಘಾಟನೆ ಮತ್ತು ಪುಸ್ತಕ ಸಾಂಕೇತಿಕತೆ

ಸಾಹಿತ್ಯಾವಲೋಕನದಲ್ಲಿ ಪ್ರವಾಸ ಸಾಹಿತ್ಯದ ಬಗೆಗೆ ಡಾ. ಮೀನಾಕ್ಷಿ ರಾಮಚಂದ್ರ, ಆತ್ಮಕತೆ ಬಗೆಗೆ ಡಾ. ಶೈಲಜಾ, ವೈಚಾರಿಕ ಲೇಖನಗಳ ಬಗೆಗೆ ಬಿ. ಎಂ. ರೋಹಿಣಿ, ಸಣ್ಣ ಕತೆಗಳ ಬಗೆಗೆ ಸುಶೀಲಾ ಆರ್. ರಾವ್, ನಾಟಕಗಳ ಬಗೆಗೆ ಇಂದಿರಾ ಹಾಲಂಬಿ ಮಾತನಾಡಿದರು. ಕವಿತೆಗಳ ನುಡಿನಮನದಲ್ಲಿ ಚಂದ್ರಕಲಾ ನಂದಾವರ, ರೂಪಕಲಾ ಆಳ್ವ, ಶ್ರೀಕಲಾ ಉಡುಪ ಮಾತನಾಡಿದರು.

ವೇದಿಕೆಯಲ್ಲಿ ಕಲೇವಾಸಂ ಅಧ್ಯಕ್ಷೆ ಡಾ. ಜ್ಯೋತಿ ಚೇಳ್ಯಾರ್, ಉಪಾಧ್ಯಕ್ಷೆ ವಿಜಯಲಕ್ಷ್ಮಿ ಶೆಟ್ಟಿ, ಸಭಾ ಅಧ್ಯಕ್ಷೆ ವಿಜಯಲಕ್ಷ್ಮಿ ಶ್ಯಾನುಭಾಗ್.  ಉಪಸ್ಥಿತರಿದ್ದರು