ಪೋಲೀಸು ನೇಮಕಾತಿ ಇಲಾಖೆಯ ಶ್ರೀಧರ್ ಲಂಚ ತಿಂದಿದ್ದು, ಬಿ. ಕೆ. ಶೇಖರ್ ನೇತೃತ್ವದಲ್ಲಿ ವಾರಂಟ್ ಮೇಲೆ ಬಸವೇಶ್ವರ ನಗರದ ಶಾರದಾ ಕಾಲೋನಿಯ ಮನೆಯ ಮೇಲೆ ದಾಳಿ ಮಾಡಿದಾಗ 16 ಜಪ್ತಿಗೆ ಸಿಕ್ಕಿತು. ಉಳಿದ ಹಣ ಏನಾಯ್ತು?
ಮರುದಿನ ಮತ್ತೆ ದಾಳಿ ಮಾಡಿ 1.50 ಕೋಟಿ ರೂಪಾಯಿ ಜಪ್ತಿ ಮಾಡಿದಾಗಲೇ ಸತ್ಯ ತಿಳಿದುದು. ಶ್ರೀಧರ್ ಕೋಟಿ ಹಣವನ್ನು ಸ್ನೇಹಿತನ ಮನೆಯಲ್ಲಿ ಅಡಗಿಸಿಟ್ಟಿದ್ದ. ದಾಳಿಗೆ ಹೆದರಿ ಸ್ನೇಹಿತ ಹಣ ಹಿಂತಿರುಗಿ ತಂದಿದ್ದ. ಈಗ ಸ್ನೇಹಿತನನ್ನು ಸಾಕ್ಷಿ ಮಾಡಿ ತನಿಖೆ ಮುಂದುವರಿದಿದೆ.