ಉಜಿರೆ: ಸ್ಥಳೀಯ ಎಸ್.ಡಿ.ಎಂ. ಕಾಲೇಜಿನ ನಿವೃತ್ತ ಸಂಸ್ಕೃತ ಪ್ರಾಧ್ಯಾಪಕ ಡಾ.ಇ. ಮಹಾಬಲ ಭಟ್ (67) ಗುರುವಾರ ಬೆಳಿಗ್ಯೆ ಪುತ್ತೂರಿನಲ್ಲಿತನ್ನ ಸಹೋದರಿಯ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು.

1978 ರಲ್ಲಿ ಉಜಿರೆಯಲ್ಲಿಎಸ್.ಡಿ.ಎಂ.ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕರಾಗಿ ಸೇರಿದಅವರು 35 ವರ್ಷ ಸೇವೆ ಸಲ್ಲಿಸಿ 2013 ರಲ್ಲಿ ನಿವೃತ್ತರಾದರು.ನಿವೃತ್ತಿ ಬಳಿಕ ಉಜಿರೆಯಲ್ಲಿ ನಿಡ್‍ಗಲ್‍ನಲ್ಲಿಅವರು ವಾಸ್ತವ್ಯಇದ್ದರು.

ಅರೆಕಾಲಿಕಾ ಪತ್ರಿಕಾ ವರದಿಗಾರರಾಗಿಯೂ, “ಮಂಜುವಾಣಿ” ಮಾಸ ಪತ್ರಿಕೆಯ ಸಹಸಂಪಾದಕರಾಗಿಯೂಅವರು ಸೇವೆ ಸಲ್ಲಿಸಿದ್ದಾರೆ.

ಅವರಿಗೆ ಪತ್ನಿ ಮತ್ತು ಒಬ್ಬ ಮಗ ಇದ್ದಾರೆ. ಗುರುವಾರ ಸಂಜೆಉಜಿರೆಯರುದ್ರ ಭೂಮಿಯಲ್ಲಿ ಅವರ ಅಂತ್ಯ ಸಂಸ್ಕಾರ ನಡೆಸಲಾಯಿತು.