ಉಡುಪಿ,(ಸೆಪ್ಟೆಂಬರ್, 5): ಉಡುಪಿ ಅಂಚೆ ಅಧೀಕ್ಷಕರ ಕಛೇರಿಯಲ್ಲಿ ಸೆಪ್ಟೆಂಬರ್ 14 ರಂದು ಸಂಜೆ 3 ಘಂಟೆಗೆ ತ್ರೈಮಾಸಿಕ ಅಂಚೆ ಅದಾಲತನ್ನು ನಡೆಸಲಾಗುವುದೆಂದು ಅಂಚೆ ಅಧೀಕ್ಷಕರು ತಿಳಿಸಿದ್ದು, ಅಂಚೆ ಗ್ರಾಹಕರು ತಮ್ಮ ದೂರು ಮತ್ತು ಸಲಹೆಗಳನ್ನು ಸೆಪ್ಟೆಂಬರ್ 11 ರಂದು ಸಂಜೆ 3.00ಘಂಟೆ ಮೊದಲು ಅಧೀಕ್ಷಕರ ಕಛೇರಿಗೆ ಕಳುಹಿಸಬಹುದು ಹಾಗೂ ಅಂಚೆ ಅದಾಲತ್ ನಡೆಯುವ ದಿನದಂದು ಹಾಜರಿದ್ದು ಸಮಕ್ಷಮ ಚರ್ಚಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದೆಂದು ಅಂಚೆ ಇಲಾಖೆಯ ಪ್ರಕಟಣೆ ತಿಳಿಸಿದೆ.
