ಉಡುಪಿ : ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಪ್ರಧಾನ ಪೀಠಕ್ಕೆ ವರದಿ ನೀಡುವ ಸಲುವಾಗಿ ಜಿಲ್ಲೆಯ ವಿವಿದ ಜಲಮೂಲಗಳ (ಕೆರೆಗಳ) ಸಮೀಕ್ಷೆಯನ್ನು ಗ್ರಾಮ ಪಂಚಾಯತ್ ಹಾಗೂ ಪಂಚಾಯತ್ ರಾಜ್ ಇಂಜಿನಿಯರಿoಗ್ ವಿಭಾಗದ ಮೂಲಕ ಜಂಟಿಯಾಗಿ ಕೈಗೊಳ್ಳಲಿದ್ದು, ಈ ಜಲಮೂಲ ಸಮೀಕ್ಷಾ ಅಭಿಯಾನವನ್ನು ಜೂನ್ 15 ರಿಂದ 20 ರ ಅವಧಿಯಲ್ಲಿ ಕೈಗೊಳ್ಳಲಾಗುವುದು.

      ಈ ಅಭಿಯಾನದಡಿ ಕೆರೆಗಳ ಸಮೀಕ್ಷೆಗಾಗಿ ಅಗಮಿಸುವ ತಂಡಕ್ಕೆ , ಗ್ರಾಮಸ್ಥರು ಅಗತ್ಯ ಮಾಹಿತಿಗಳನ್ನು ಹಾಗೂ ಸಲಹೆಗಳನ್ನು ನೀಡಿ ಸಮೀಕ್ಷೆಯಲ್ಲಿ ಸಹಕರಿಸುವಂತೆ ಜಿಲ್ಲಾ ಪಂಚಾಯತ್ ಸಿಇಓ ಪ್ರೀತಿ ಗೆಹಲೋತ್ ತಿಳಿಸಿದ್ದಾರೆ.