ಉಡುಪಿ (ಜೂನ್ 30): ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆಗೆ ಐ.ಟಿ.ಸಿ. ಲಿಮಿಟೆಡ್ರವರಿಂದ ಕೊವಿಡ್ 19 ಸಲುವಾಗಿ ಕ್ಯಾರಂಟೈನ್ನಲ್ಲಿ ನೆಲೆಸಿರುವವರಿಗೆ, ಆಶಾ ಕಾರ್ಯಕರ್ತೆಯರು, ಫೈಮರಿ ಹೆಲ್ತ್ ಸೆಂಟರ್ ಮತ್ತು ಸ್ಲಮ್ನವರಿಗೆ ವಿತರಿಸಲು ಎನರ್ಜಿ ಡ್ರಿಂಕ್ಸ್ (Tetra packs of fruit juice) ಗಳನ್ನು ಹಸ್ತಾಂತರಿಸಲು ಉಡುಪಿ ಜಿಲ್ಲಾ ಘಟಕಕ್ಕೆ ಕಳಿಸಿರುತ್ತಾರೆ.
ಸದ್ರಿ ಎನರ್ಜಿ ಡ್ರಿಂಕ್ಸ್ಗಳನ್ನು ರೆಡ್ ಕ್ರಾಸ್ ತಾಲೂಕು ಘಟಕಗಳಾದ ಬೈಂದೂರು, ಕಾರ್ಕಳ, ಬ್ರಹ್ಮಾವರ ಶಾಖೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳಿಗೆ ಹಸ್ತಾಂತರಿಸುವ ಮತ್ತು ವೈದ್ಯರ ದಿನಾಚರಣೆಯನ್ನು ಜುಲೈ 1 ರಂದು ಬೆಳಿಗ್ಗೆ 9.45 ಘಂಟೆಗೆ ರೆಡ್ ಕ್ರಾಸ್ ಭವನದ ಹೆನ್ರಿ ಡ್ಯುನಾಂಟ್ ಹಾಲ್ ನಲ್ಲಿ ಜಿಲ್ಲಾಧಿಕಾರಿಯವರು, ಉಡುಪಿ ಹಾಗೂ ಅಧ್ಯಕ್ಷರು, ಭಾ.ರೆ.ಕ್ರಾ.ಸಂ. ಉಡುಪಿ ಜಿಲ್ಲಾ ಘಟಕದ ಇವರ ಘನ ಉಪಸ್ಥಿತಿಯಲ್ಲಿ ಆಚರಿಸಲಾಗುವುದು.
ಕಾರ್ಯಕ್ರಮದಲ್ಲಿ ಬಸ್ರೂರು ರಾಜೀವ್ ಶೆಟ್ಟಿ, ಸಭಾಪತಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕ, ಉಪಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ. ಗೌರವ ಖಚಾಂಚಿ ಟಿ. ಚಂದ್ರಶೇಖರ್, ಗೌರವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಕೆ ಮತ್ತು ಆಡಳಿತ ಮಂಡಳಿ ಸದಸ್ಯರುಗಳು ಉಪಸ್ಥಿತರಿರುವರು.
ಆದರೆ ಕೊವಿಡ್ 19 ಪ್ರಯುಕ್ತ ಯಾವುದೇ ಸಭೆ ಸಮಾರಂಭಗಳನ್ನು ಮಾಡಲು ಅವಕಾಶÀ ಇಲ್ಲದೇ ಇರುವುದರಿಂದ ಸದ್ರಿ ಕಾರ್ಯಕ್ರಮವನ್ನು ಕೊವಿಡ್ 19 ನಿಯಮದ ಪ್ರಕಾರ ಸ್ಯಾನಿಟೈsಸೇಶನ್, ಮಾಸ್ಕ್ ಧರಿಸುವಿಕೆ ಮತ್ತು ಅಗತ್ಯ ಸಾಮಾಜಿಕ ಅಂತರದ ನಿಬಂಧನೆಗಳನ್ನು ಚಾಚೂ ತಪ್ಪದೇ ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ರೆಡ್ ಕ್ರಾಸ್ ಪ್ರಕಟಣೆ ತಿಳಿಸಿದೆ.