ಉಡುಪಿ (ಜುಲೈ 29):  ಸರಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯಡಕದಲ್ಲಿ ‘ಹಿರಿಯ ಸಿರಿ’ ಕಾಲೇಜು ವಾರ್ಷಿಕ ಸಂಚಿಕೆ ಹಾಗೂ ಪ್ರಥಮ ಆವೃತ್ತಿಯ ಸುದ್ದಿ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ನಡೆಯಿತು.

ವಾರ್ಷಿಕ ಸಂಚಿಕೆಯನ್ನು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಲಾಲಾಜಿ.ಆರ್.ಮೆಂಡನ್ ಉದ್ಘಾಟಿಸಿ ಮಾತನಾಡಿ, ವಾರ್ಷಿಕ ಸಂಚಿಕೆಯು ಉತ್ತಮವಾಗಿ ಮೂಡಿ ಬಂದಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಅಗತ್ಯ ಸಹಕಾರವನ್ನು ನೀಡಲಾಗುವುದು ಎಂದು ತಿಳಿಸಿದರು.

ಪ್ರಥಮ ಆವೃತ್ತಿಯ ‘ಸುದ್ದಿ ಪತ್ರಿಕೆ’ಯನ್ನು ಶಿಕ್ಷಣ ತಜ್ಞರಾದ ಡಾ.ಎನ್.ಎಸ್. ಶೆಟ್ಟಿಯವರು ಬಿಡುಗಡೆಗೊಳಿಸಿ ಸಂಪಾದಕ ಮಂಡಳಿಯನ್ನು ಶ್ಲಾಘಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ನಿಕೇತನ ಪ್ರಾಸ್ತವಿಕ ಮಾತನಾಡಿ ಕಾಲೇಜು ವಾರ್ಷಿಕ ಸಂಚಿಕೆಯು ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ಕತೆ,ಕವನ, ಪ್ರವಾಸ ಕಥನ, ವೈಚಾರಿಕ ಲೇಖನಗಳನ್ನು ಒಳಗೊಂಡಿದ್ದು ಕಾಲೇಜಿನ ಬೌದ್ಧಿಕ ಸಂಪತ್ತಿನ ಮುಖವಾಣಿಯಾಗಿ ಮೂಡಿ ಬಂದಿದೆ ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಸದಸ್ಯೆ ಸಂಧ್ಯಾ ಕಾಮತ್, ಕಾಲೇಜು ವಾರ್ಷಿಕ ಸಂಚಿಕೆಯ ಸಂಪಾದಕಿ ಸುಜಯಾ ಕೆ, ಐಕ್ಯೂಎಇ ಸಂಚಾಲಕಿ ಸುಮನಾ.ಬಿ, ಕಾಲೇಜು ಅಭಿವೃದ್ಧಿ ಅಮಿತಿ ಸದಸ್ಯರು, ಬೋಧಕ ಬೋಧತೇತರ ಸಿಬ್ಬಂದಿ ಉಪಸ್ಥಿತರಿದ್ದರು.