ಮಂಗಳೂರು: ಮಂಗಳೂರಿನ ಖ್ಯಾತ ಹೃದಯತಜ್ಞ ಡಾ. ಆನಂದ ವಿ ಶೆಟ್ಟಿ(86 ವರ್ಷ) ಇಂದು ನಿಧನರಾಗಿದ್ದಾರೆ. ಇವರು ಮಂಗಳೂರಿನ ಫಾದರ್ ಮುಲ್ಲರ್‍ ಆಸ್ವತ್ರೆಯಲ್ಲಿ ಪ್ರಸಿದ್ದ ಹೃದಯತಜ್ಞರಾಗಿ ಕೆಲಸ ನಿರ್ವಹಿಸಿ ನಂತರ ಕಾರ್‍ ಸ್ಟ್ರೀಟ್‍ನಲ್ಲಿ ಕ್ಲಿನಿಕ್ ನಡೆಸುತ್ತಿದ್ದರು. ಅನೇಕರಿಗೆ ಚಿಕಿತ್ಸೆಯನ್ನು ನೀಡಿರುತ್ತಾರೆ. ಇವರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಶಕ್ತಿನಗರದ ಸ್ಥಾಪಕ ಟ್ರಸ್ಟಿಯಾಗಿ ಶ್ರೀ ದೇವರ ಸೇವೆಯನ್ನು ಮಾಡುತ್ತಿದ್ದರು. ಇವರು ಶಕ್ತಿ ಶಿಕ್ಷಣ ಸಂಸ್ಥೆಯ ಸ್ಥಾಪನೆಯಿಂದ ಇಂದಿನವರೆಗೆ ಮಾರ್ಗದರ್ಶಕರಾಗಿ, ಹಿತ್ಯೇಷಿಗಳಾಗಿ ಪ್ರೋತ್ಸಾಹವನ್ನು ನೀಡುತ್ತಾ ಬರುತ್ತಿದ್ದರು.ಇವರ ನಿಧನಕ್ಕೆ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಶಕ್ತಿನಗರದ ಆಡಳಿತ ಮೊಕ್ತೇಸರಾದಡಾ. ಕೆ.ಸಿ. ನಾೈಕ್ ಭಾವಪೂರ್ಣ ಶ್ರದ್ದಾಂಜಲಿಯನ್ನುಅರ್ಪಿಸುತ್ತಿದ್ದಾರೆ.