ಮಂಗಳೂರು:- ಮಂಗಳೂರಿನಲ್ಲಿ ದಿನಾಂಕ:-17-09-2020 ರಂದು ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದರ ವಿಚಂದ್ರ ಪಿ.ಎಮ್‍ ಮತ್ತು ರಮೇಶ್ ಕೆ ನಡೆಸಿರುವ ಜಂಟಿ ಪತ್ರಿಕಾಗೋಷ್ಠಿಯಲ್ಲಿ "ದೇಶದ ವಿವಿದೆಡೆಯಿಂದ ಡ್ರಗ್ಸ್‍ನ ಸೇವನೆ ಹಾಗೂ ಅದರಿಂದಾದ ಹಲವು ಸಮಸ್ಯೆಗಳ ಬಗ್ಗೆ ದಿನನಿತ್ಯ ಸುದ್ದಿ ಬರುತ್ತದೆ. ಅದರಲ್ಲೂ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಇದಕ್ಕೆಬಲಿ ಆಗುತ್ತಿರುವುದು ನಿಜಕ್ಕೂ ಖೇದಕರ ವಿಚಾರವಾಗಿದೆ. ಮಂಗಳೂರಿನಲ್ಲೂ ಕೂಡ ಈ ಬಗ್ಗೆ ಹಲವು ಅನಾಹುತ ಘಟನೆ ನಡೆದು, ವಿದ್ಯಾರ್ಥಿಗಳು ಆತ್ಮಹತ್ಯೆ ನಡೆಸಿರುವಂತಹ, ವಿದ್ಯಾರ್ಥಿಗಳು ಹಲವು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿರು ವಘಟನೆ ವರದಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಮಂಗಳೂರು ವಿವಿಯ ವ್ಯಾಪ್ತಿಯಲ್ಲಿ ಡ್ರಗ್ಸ್ ಬಗ್ಗೆ ಜನ ಜಾಗೃತಿ ನಡೆಸಲು ವಿಶೇಷ ಪ್ರಯತ್ನ ನಡೆಸಲಾಗುವುದು. ಮಂಗಳೂರು ವಿ.ವಿ.ಸಿಂಡಿಕೇಟ್ ಸಭೆಯಲ್ಲೂ ಈ ಬಗ್ಗೆ ವಿಶೇಷ ಚರ್ಚೆ ನಡೆಸಿ ಮುಂದಿನ ಕ್ರಮಗಳ ಬಗ್ಗೆ ಯೋಜನೆ ರೂಪಿಸಲಾಗುವುದು".

"ಪ್ರತಿಯೊಂದು ಕಾಲೇಜಿನಲ್ಲಿ ಕೂಡ ಡ್ರಗ್ಸ್ ಬಗ್ಗೆ ಜಾಗೃತಿ ಹಾಗೂ ಅದರ ದುಷ್ಪರಿಣಾಮಗಳ ಬಗ್ಗೆ ನಿಯಂತ್ರಣಕ್ಕಾಗಿ ಸಮಿತಿ ರಚನೆ ಮಾಡಿದ್ದು, ಇದನ್ನುಇನ್ನಷ್ಟು ಬಲಿಷ್ಠ ಗೊಳಿಸಲಾಗುವುದು. ಅಲ್ಲದೆ ಕಾಲೇಜಿನ ವಿದ್ಯಾರ್ಥಿ ಸಂಘ, NSS, NCC ಮುಂತಾದ ಘಟಕಗಳು ಈ ಬಗ್ಗೆ ವಿಶೇಷ ಪ್ರಯತ್ನ ಮಾಡುವಂತೆತರಬೇತಿ ನೀಡಲಾಗುವುದು".

ಡ್ರಗ್ಸ್ ಬಗ್ಗೆ ಜನ ಜಾಗೃತಿ:-

1. ಕಾಲೇಜಿನಲ್ಲಿ ವಾರ್ಷಿಕ ಆರಂಭದಲ್ಲಿ ವಿದ್ಯಾರ್ಥಿ ಜಾಗೃತಿ ಸಭೆ.

2. ಕಾಲೇಜಿನಲ್ಲಿ ಈ ಬಗ್ಗೆ Task Force ರೂಪಿಸುವಿಕೆ.

3. ಸ್ವಯಂಸೇವಾಜತೆ ಸೇರಿ ಜನಜಾಗೃತಿ ಅಭಿಯಾನ.

4. ಡ್ರಗ್ಸ್ ವಿರುದ್ಧಕಠಿಣ ಕಾನೂನು ರೂಪಿಸುವಂತೆ ರಾಜ್ಯ ಸರಕಾರಕ್ಕೆ ಮನವಿ.

5. ವಿದ್ಯಾರ್ಥಿಗಳಿಂದ ನಾನು ಡ್ರಗ್ಸ್ ಸೇವನೆ ಮಾಡುವುದಿಲ್ಲ ಹಾಗೂ ಡ್ರಗ್ಸ್ ಬಗ್ಗೆ ಜಾಗೃತಿ ಕೆಲಸ ಬಗ್ಗೆ ಸಂಕಲ್ಪ.

6. ಡ್ರಗ್ಸ್ ಸಮಸ್ಯೆ ಬಗ್ಗೆ ಸಾಕ್ಷ್ಯ ಚಿತ್ರ ಪ್ರದರ್ಶನ.

7. ಡ್ರಗ್ಸ್ ಮಾರಾಟಗಾರರನ್ನುಅದರ ದುಶ್ಚಟಕ್ಕೆ ಬಲಿ ಬಿಳಿಸುತ್ತಿರುವರನ್ನು ಅದರ ಮೋಹಕ- ಸರ್ವನಾಶಕ ಜಾಲ ಸೃಷ್ಠಿಸುತ್ತಿರುವರನ್ನು ಬಗ್ಗು ಬಡಿಯಬೇಕು. ರಾಜ್ಯದ ಸಮಸ್ತ ಜನತೆ ಸರ್ಕಾರದ ಕಠಿಣ ಕ್ರಮಗಳನ್ನು ಎದುರು ನೋಡುತ್ತದೆ.

8. ಡ್ರಗ್ಸ್ ನಿಯಂತ್ರಣ ಕೇವಲ ಪೋಲಿಸರ ಮತ್ತು ಸರ್ಕಾರದ ಕೆಲಸವಲ್ಲ ಪ್ರತಿಯೊಬ್ಬ ಜಾಗೃತ ನಾಗರೀಕನೂ ಈ ಬಗ್ಗೆ ಸ್ಪಂದಿಸಬೇಕು. ಕಾನೂನು ರಕ್ಷಕರಿಗೆ ಸಕಾಲಕ್ಕೆ ಮಾಹಿತಿಕೊಟ್ಟು ಮುಂದೆ ಆಗುವ ಅನರ್ಥವನ್ನುತಪ್ಪಿಸಬೇಕು.

9. ಡ್ರಗ್ಸ್ ದಂದೆಗೂ ದೇಶ ದ್ರೋಹಕ್ಕೂ ನಂಟಿದೆ. ಅಂತೆಯೇ ಈ ದಂದೆಯವರನ್ನು ರಕ್ಷಿಸುವುದೆಂದರೆ, ಅದನ್ನು ಯಾರೇ ಮಾಡಿದರೂ ಅದು ದೇಶದ್ರೋಹದ ಕೃತ್ಯವಾಗುತ್ತದೆ. ಅದಕ್ಕೂ ಕಠಿಣ ದಂಡನೆಯಾಗಬೇಕು.

10. ಸಮಾಜದ ಬುದ್ದಿಜೀವಿಗಳು, ಜನನಾಯಕರು, ಸಾಹಿತಿಗಳು, ಮಠಾದೀಶರು ಸಂಘ ಸಂಸ್ಥೆಗಳ ನಾಯಕರು ಪಕ್ಷಭೇದ ಮರೆತು ಎಲ್ಲಾ ರಾಜಕೀಯ ನಾಯಕರು ಜನಾಭಿಪ್ರಾಯ ರೂಪಿಸುವ ಮಾದ್ಯಮದ ಬಂಧುಗಳು, ವಿದ್ಯಾರ್ಥಿ ನಾಯಕರು, ಅಧ್ಯಾಪಕ ಬಂಧುಗಳು, ಶಿಕ್ಷಣ ತಜ್ಞರು ಎಲ್ಲರ ಸಹಕಾರದೊಂದಿಗೆ ಈ ಒಂದು ಪಿಡುಗನ್ನು ತೊಡಗಿಸಲು ಪ್ರಯತ್ನಿಸಬೇಕು" ಎ೦ದು ಮಂಗಳೂರು ವಿ.ವಿ.ಸಿಂಡಿಕೇಟ್ ಸದಸ್ಯರಾದ  ರವಿಚಂದ್ರ ಪಿ. ಎಮ್ ಹಾಗೂ ರಮೇಶ್ ಕೆ. ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.