ಬಂಟ್ವಾಳ : ಲೋಕೋಪಯೋಗಿ ಉಪವಿಭಾಗ ದಲ್ಲಿ ಸುಮಾರು 5ವರ್ಷಗಳ ಕಾಲ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ ಉಮೇಶ್ ಭಟ್ ವೈರವರು ಪದೋನ್ನತಿ ಹೊಂದಿ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಮಂಗಳೂರು ವಿಶ್ವವಿದ್ಯಾಲಯಕ್ಕೆ ವರ್ಗಾವಣೆಗೊಂಡಿದ್ದು ಅವರನ್ನು ಲೋಕೋಪಯೋಗಿ ಇಲಾಖೆ ಇದರ ವತಿಯಿಂದ ಬೀಳ್ಕೊಡುಗೆ ಸಮಾರಂಭವು ಉಪವಿಭಾಗದ  ಸಭಾಂಗಣದಲ್ಲಿ ಜರಗಿತು. ಪ್ರಭಾರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಮೃತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ರಾಜ್ ಇಂಜಿನಿಯರಿಂಗ್   ಉಪವಿಭಾಗದ ಎಇಇ. ರೋಹಿದಾಸ್ ಮತ್ತು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಉಪವಿಭಾಗದ ಎಇಇ. ಮಹೇಶ್, ಇಂಜಿನಿಯರುಗ ಳಾದ ಅರುಣ್ ಪ್ರಕಾಶ್ , ಪ್ರೀತಮ್, ರ ವೀಂದ್ರನಾಥ್ ಶೆಟ್ಟಿ, ಶ್ರೀಕೃಷ್ಣ, ಜಗ ದೀಶ್, ಅಜಿತ್, ಕುಶ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.