ಮಂಗಳೂರು: ಜಿಲ್ಲಾ ಕಾಂಗ್ರೆಸ್ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿಯ ಪ್ರಯುಕ್ತ ಗಾಂಧೀ 150 ಕಾರ್ಯಕ್ರಮವು  ನಡೆಯಿತು, ಈ ಪ್ರಯುಕ್ತ ಮಂಗಳೂರಿನ ಕರಾವಳಿ ಉತ್ಸವ ಮೈದಾನದಿಂದ ಲಾಲ್‍ಭಾಗ್, ಎಂ.ಜಿ ರೋಡ್, ಪಿ.ವಿ.ಎಸ್, ಬಂಟ್ಸ್ ಹಾಸ್ಟೆಲ್, ಜ್ಯೋತಿ ಸರ್ಕಲ್ ಮಾರ್ಗವಾಗಿ ಹಂಪನಕಟ್ಟಾ ಮುಖಾಂತರ ನಗರದ ಕುದ್ಮುಲ್ ರಂಗರಾವ್ ಪುರಭವನದವರೆಗೆ ಕಾಲ್ನಡಿಗೆ ಜಾಥಾ ಯಶಸ್ವಿ  ಯಾಗಿ ನಡೆದಿತ್ತು. ಅದಲ್ಲದೇ ತದ ನಂತರ  ಕುದ್ಮುಲ್ ರಂಗರಾವ್ ಪುರಭವನದ ಮುಂಭಾಗದಲ್ಲಿ ಬಹಿರಂಗ ಸಭೆಯು ನಡೆಯಿತು.