ಮಂಗಳೂರು: ಕಾದಂಬರಿಕಾರ ಪಿ.ವಿ. ಪ್ರದೀಪ್ ಕುಮಾರ್ ಪರಿಕಲ್ಪನೆಯಲ್ಲಿ ಮೂಡಿಬರಲಿರುವ 'ಬದಲಾಗದವರು, ಜೀವನದಲ್ಲಿ ಬದಲಾಗುವರೇ' ಎಂಬ ಟ್ಯಾಗ್ಲೈನ್ ನಡಿ ಚಿತ್ರೀಕರಣಗೊಳ್ಳಲಿರುವ ಕಿರುಚಿತ್ರಕ್ಕೆ ಸೆ. 27ರಂದು ಬೆಳಗ್ಗೆ 10.30ಕ್ಕೆ ಉರ್ವಾಸ್ಟೋರ್ನ ಗಣಪತಿ ದೇವಸ್ಥಾನದಲ್ಲಿ ಮುಹೂರ್ತ ನಡೆಯಲಿದೆ ಎಂದು ಕಿರು ಚಿತ್ರದ ನಿರ್ಮಾಪಕರಾದ ಡಾ. ಸತೀಶ್ ಎನ್. ಬಂಗೇರರವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಪ್ರಮುಖ ಪಾತ್ರದಲ್ಲಿ ಸೌಜನ್ಯ ಹೆಗ್ಡೆ ನಟಿಸಲಿದ್ದು, ಕಾಸರಗೋಡು ಅಶೋಕ್ ಕುಮಾರ್, ರೈಮಂಡ್ ಡಿಕುನ್ನ ತಾಕೊಡೆ, ವಿನೀತ್ ಮಳಲಿ, ಡಾ. ಸುರಶ್ ನೆಗರಗುಳಿ, ಕಟತ್ತಿಲ್ಲ ಗೋಪಾಲಕೃಷ್ಣ ಭಟ್ ಮೊದಲಾದ ಕಲಾವಿದರು ಈ ಕಿರುಚಿತ್ರದಲ್ಲಿ ನಟಿಸಲಿದ್ದಾರೆ. 90 ನಿಮಿಷಗಳ ಕಿರುಚಿತ್ರ ಇದಾಗಿದ್ದು, ಇದನ್ನು ವಿ4 ಸ್ಕ್ರೀನ್ ಒಟಿಟಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಬ್ಯಾಂಕೋ ಫಿಲಂ ಮೂಡಬಿದರೆಯ ಡಾ. ಸತೀಶ್ ತಿಳಿಸಿದರು.
ಪಿ.ವಿ. ಪ್ರದೀಪ್ ಕುಮಾರ್ರವರ ಕಥೆ, ಚಿತ್ರಕಥೆ, ನಿರ್ದೆಶನವಾಗಿದ್ದು, ಛಾಯಾಗ್ರಹಣ ಕಮಲ್.ಜೆ ಹಾಗೂ ಸಂಭಾಷಣಿ ವಿವೇಕಾನಂದ ಕಾಮತ್, ಸಂಗೀತ : ಶರತ್ ಬಿಳಿನೆಲೆ.
ನಗರದ ಸುತ್ತಮುತ್ತ 10 ದಿನಗಳ ಈ ಕಿರುಚಿತ್ರದ ಚಿತ್ರೀಕರಣ ನಡೆಯಲಿದೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಡಾ|| ಸತೀಶ್.ಎನ್. ಬಂಗೇರ ಮತ್ತು ಪಿ.ವಿ. ಪ್ರದೀಪ್ ಕುಮಾರ್ ತಿಳಿಸಿದರು. ಧರ್ಮದರ್ಶಿ ಹರಿಕೃಷ್ಣ ಪುನರೂರು, ಜೆ.ಸಿ. ಸೌಜನ್ಯ ಹೆಗ್ಡೆ, ವಿವೇಕಾನಂದ ಕಾಮತ್, ಕಾಸರಗೋಡು ಅಶೋಕ್ ಕುಮಾರ್ ಹಾಗೂ ಸುನೀತಾ ಪ್ರದೀಪ್ಕುಮಾರ ಉಪಸ್ಥಿತರಿದ್ದರು.