ಮಂಗಳೂರು:- ಮಂಗಳೂರು ಭಾರತೀಯ ಜನತಾ ಪಾರ್ಟಿ ದ.ಕ ಜಿಲ್ಲೆಯ ಹಿಂದುಳಿದ ವರ್ಗಗಳ ಮೋರ್ಚಾ ಇದರ  ಜಿಲ್ಲಾ ಸದಸ್ಯ ಸ್ಥಾನ ಕ್ಕೆ. ಅನಿಲ್ ದಾಸ್ ಅವರನ್ನು ಆಯ್ಕೆ. ಮಾಡಲಾಗಿದೆ

ಭಾರತೀಯ ಜನತಾ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದ ಅನಿಲ್ ದಾಸ್ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘಟಕರಾಗಿ. ಉದ್ಯಮಿಯಾಗಿ. ಗುರುತಿಸಿಕೊಂಡವರು. ಪ್ರತಿವರ್ಷ ಹಿರಿಯ ಸಮಾಜ ಸೇವಕರನ್ನು ಗೌರವಿಸುವ ಕಾರ್ಯಕ್ರಮವನ್ನು ಅವರೇ ಸ್ಥಾಪಿಸಿರುವ ಟ್ರಸ್ಟಿನ ಮೂಲಕ ನಡೆಸುತ್ತಾ ಬಂದವರು.

ನೂತನ ಜವಾಬ್ದಾರಿತ ಅವಕಾಶ ಕಲ್ಪಿಸಲು ಸಹಕರಿಸಿದ ಪಕ್ಷದ ಎಲ್ಲಾ  ಹಿರಿಯರಿಗೆ .ರಾಜ್ಯಾಧ್ಯಕ್ಷರು ಜಿಲ್ಲಾಧ್ಯಕ್ಷರು.ಮತ್ತು ಕ್ಷೇತ್ರ ಅಧ್ಯಕ್ಷರು.ಪಕ್ಷದ ಹಿರಿಯ ಕಿರಿಯ ಎಲ್ಲಾ ನನ್ನ. ಆತ್ಮೀಯ ಆತ್ಮೀಯರಿಗೆ ನಾನು ಚಿರಋಣಿಯಾಗಿದ್ದೇನೆ. ಎಂದು ಈ ಮೂಲಕ ತಿಳಿಸಿದ್ದಾರೆ.

ಅನಿಲ್ ದಾಸ್ ಅವರು ಸುಗ್ಗಿ ಸೌಹಾರ್ದ ಸಹಕಾರಿ ಬ್ಯಾಂಕಿನ ಅಧ್ಯಕ್ಷರು . ದಾಸ್  ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರು  ಮಂಗಳೂರು  ಕೊಲ್ಯ  ಕುಲಾಲ ಸಂಘದ. ಕುಲಾಲ ಭವನದ ಕಟ್ಟಡ ನಿರ್ಮಾಣ ಸಮಿತಿಯ ಕಾರ್ಯ ಧ್ಯಕ್ಷರು . ಕುಲಶೇಖರ ಶ್ರೀವೀರ ನಾರಾಯಣ ದೇವಸ್ಥಾನದ ಸೇವಾ ಕಾರ್ಯದಲ್ಲೂ ತನ್ನನ್ನು ತೊಡಗಿಸಿಕೊಂಡು ಸಾಮಾಜಿಕ ಧಾರ್ಮಿಕ ಸೇವಾ ಕಾರ್ಯಗಳ ಮೂಲಕ ಜನಾನುರಾಗಿರುವವರು  ಇರುವವರು.