ಮಂಗಳೂರು (ಜೂನ್ 30): ಕರ್ನಾಟಕ ಸರ್ಕಾರದ ಆದೇಶದಂತೆ ಪ್ರತೀ ಭಾನುವಾರ ಲಾಕ್‍ಡೌನ್ ಜಾರಿಮಾಡುವುದಾಗಿ ತಿಳಿಸಿದೆ. ಆದರೆ ಭಾನುವಾರ ಮಾತ್ರ ಲಾಕ್‍ಡೌನ್ ಮಾಡುವುದು ಯಾವ ಉದ್ದೇಶದಿಂದ ? ಎಂದು ಕರ್ನಾಟಕ ಸರ್ಕಾರಕ್ಕೆ ಮಾಜಿ ಶಾಸಕರಾದ ಐವನ್ ಡಿಸೋಜರವರು ಪ್ರಶ್ನೆ ಹಾಕಿದ್ದಾರೆ.

ಈ ಹಿಂದೆ  ಭಾನುವಾರ ಲಾಕ್‍ಡೌನ್ ಮಾಡುವುದಾಗಿ ಕ್ರಮ ತೆಗೆದುಕೊಂಡಿತ್ತು. ಆದರೆ ಭಾನುವಾರದ ಲಾಕ್‍ಡೌನ್‍ನಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ ಎಂದು ತಿಳಿದ ಸರ್ಕಾರ ಭಾನುವಾರದ ಲಾಕ್‍ಡೌನ್‍ನ್ನನ್ನೇ ಹಿಂತೆಗೆಯಲಾಯಿತು. ಹಾಗಾಗಿ ಈಗ ಸರ್ಕಾರ ಭಾನುವಾರದ ಲಾಕ್‍ಡೌನ್‍ನ ಉದ್ದೇಶವನ್ನು ಜನಗಳಿಗೆ ತಿಳಿಸಬೇಕು, ಕೊರೋನಾ ನಿಯoತ್ರಣಕ್ಕೆ ಕೇವಲ ಭಾನುವಾರ ಲಾಕ್‍ಡೌನ್ ಮಾಡುವುದು ಸರಿಯಲ್ಲ. ಸರ್ಕಾರ ನಿರ್ಧಿಷ್ಟವಾದ, ಕಠೀಣವಾದ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಐವನ್ ಡಿಸೋಜರವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.