ಮುಂಬಯಿ : 2019ನೇ ಸಾಲಿನ ಪವಿತ್ರ ಹಜ್ಜ್ ನಿರ್ವಹಿಸಲು ಭಾರತದ ದೆಹಲಿಯಿಂದ ಅಗಮಿಸಿದ ಪ್ರಥಮ ಹಜ್ಜ್ ತಂಡವು ಇಂದು ಪವಿತ್ರ ಮದೀನಾ ಮುನವ್ವರದಿಂದ ಪುಣ್ಯ ಮಕ್ಕಾ ನಗರಕ್ಕೆ ತಲುಪಿದ್ದು. ಈ ಎಲ್ಲಾ ಹಾಜಿಗಳನ್ನು ಕನಾ೯ಟಕ ಕಲ್ಚರಲ್ ಪೌಂಡೇಷನ್ KCFಹಜ್ಜ್ ಸ್ಟಯಂ ಸೇವಕರು (HVC) ಬಹಳ ಆತ್ಮೀಯವಾಗಿ ಸ್ವಾಗತಿಸಿದರು.

ಇದೇ ವೇಳೆ ಭಾರತದ ರಾಯಭಾರಿಯಾಗಿ ಆಗಮಿಸಿದ ಡಾ| ಆಸಫ್ ಸಯೀದ್ ಹಾಗೂ  ಭಾರತ ದೂತವಾಸ ಕಚೇರಿಯ ಸಲಹೆಗಾರರಾದ ನೂರ್ ರಹ್ಮಾನ್ ಶೇಖ್ ರವರನ್ನು ಕೆ.ಸಿ.ಎಫ್ ಮಕ್ಕತ್ತುಲ್ ಮುಕರ್ರಮಃ ಸೆಕ್ಟರ್ HVC ತಂಡದ ವತಿಯಿಂದ ಪ್ರತ್ಯೇಕ ಹೂ ಗುಚ್ಚಗಳನ್ನು ನೀಡಿ ಸನ್ಮಾನಿಸಲಾಯಿತು. 



ಅದೇ ರೀತಿ ಮಕ್ಕಾದ ವಸತಿ ಕೇಂದ್ರಗಳಲ್ಲಿ ಹಾಜಿಗಳ ಕೂಠಡಿ ಗಳಿಗೆ ಲಗೇಜು, ಸಾಮಾಗ್ರಿಗಳನ್ನು ಕೊಂಡೊಯ್ಯಲು ಸಹಾಯಕರಾಗುವುದರೊಂದಿಗೆ ಮುಂದಿನ ದಿನಗಳಲ್ಲಿ ಪುಣ್ಯ ಮಕ್ಕಾ ನಗರಗಳಿಗೆ ಆಗಮಿಸುತ್ತಿರುವ ಎಲ್ಲಾ ರಾಷ್ಟ್ರಗಳ ಹಜ್ಜಾಜಿಗಳ ಸಮಸ್ಯೆಗಳಿಗೆ ಸ್ಪಂದಿಸಲಿದ್ದು, ಮಸ್ಜುದುಲ್ ಹರಮ್ ಸೇರಿದಂತೆ ವಿವಿದ ಕಡೆಗಳಲ್ಲಿ ಅನಾರೋಗ್ಯದಿಂದ ಬಳಲುವ ಹಾಗೂ ತಮ್ಮ ವಸತಿಗಳಿಗೆ ಮರಳಲು ದಾರಿ ತಿಳಿಯದೇ ಆತಂಕಕ್ಕೆ ಒಳಗಾಗುವ ನಿಸ್ಸಹಾಯಕ ಹಾಜಿಗಳಿಗೆ ಮಾರ್ಗದರ್ಶನ ನೀಡಲು ಕೆಸಿಎಫ್ ನ HVC ಸ್ವಯಂ ಸೇವಕರು ಮಕ್ಕಾ ಹಾಗೂ ಮದೀನಾದಲ್ಲಿ ನಿರಂತರ ಸೇವೆಯಲ್ಲಿರುತ್ತಾರೆ.