"ವಿಜಯಾ ಬ್ಯಾಂಕ್‍ನ ಸ್ಥಾಪಕಾಧ್ಯಕ್ಷರಾದ ಮೂಲ್ಕಿ ಸುಂದರರಾಮ ಶೆಟ್ಟಿಯವರ ಹೆಸರನ್ನು ಮಂಗಳೂರು ಮಹಾನಗರ ಪಾಲಿಕೆಯ ರಸ್ತೆಗೆ ಇಂದು ಮರು ನಾಮಕರಣ ಮಾಡುತ್ತಿರುವುದು ತಿಳಿಯಿತು".

"ಮೂಲ್ಕಿ  ಎಂ.ಸುಂದರ್‍ರಾಮ್ ಶೆಟ್ಟಿಯವರ ಜೊತೆಗೆ ನಾನು ಕೆಲವು ವರ್ಷಗಳಲ್ಲಿ ವಿಜಯಾ ಬ್ಯಾಂಕ್‍ನ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೆ. ಶ್ರೀಯುತರ  ತೀಕ್ಷ್ಣಮತಿ, ಬ್ಯಾಂಕ್ ಮತ್ತು ಇನ್ಸುರೆನ್ಸ್  ಬಗ್ಗೆ ಮಾಹಿತಿ, ಶೀಘ್ರ ನಿರ್ಧಾರ ಪ್ರಸಿದ್ಧವಾದದ್ದು. ಬ್ಯಾಂಕ್‍ನ ಅಧ್ಯಕ್ಷರಿಗಿದ್ದ ಸ್ವಾತಂತ್ರ್ಯವನ್ನು ಬಳಸಿ ಸಾವಿರಾರು ಯುವಕರಿಗೆ ಉದ್ಯೋಗಾವಕಾಶ ನೀಡಿದರು. ಭಾರತ ದೇಶದ ಎಲ್ಲಾ ರಾಜ್ಯಗಳಲ್ಲೂ ಶಾಖೆಗಳನ್ನು ತೆರೆದು ಗಮನಾರ್ಹ ಪ್ರಗತಿಯನ್ನು ಸಾಧಿಸಿದರು.ಇಂದು ವಿಜಯಾ ಬ್ಯಾಂಕ್ ಬ್ಯಾಂಕ್‍ ಆಫ್ ಬರೋಡದೊಂದಿಗೆ ಲೀನವಾಗಿ ತನ್ನ ಹೆಸರು ಮರೆ ಮಾಚಿ ಹೋದಾಗ ಶ್ರೀ ಶೆಟ್ಟಿಯವರ ಸೇವೆ ಮತ್ತು ಅವರ ಹೆಸರು ರಸ್ತೆಗೆ ನಾಮಕರಣ ಮಾಡಿರುವುದು ಅತ್ಯಂತ ಸೂಕ್ತವಿದೆ. ನಮ್ಮೆಲ್ಲರಿಗೂ ಸಂತೋಷವಾಗಿದೆ. ಈ ಕಾರ್ಯ ಮಾಡಿದ ಮಂಗಳೂರು ಮಹಾನಗರ ಪಾಲಿಕೆಗೆಅಭಿನಂದನೆ ಸಲ್ಲಿಸುತ್ತಿದ್ದೇನೆ" ಎ೦ದು ಡಾ.ವೀರೇಂದ್ರ ಹೆಗ್ಗಡೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.