ಮೂಡುಬಿದರೆ: ಸ್ಥಳೀಯ ಒಂಟಿಕಟ್ಟೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯ 35ನೇ ವರ್ಷದ ಗಣೇಶೋತ್ಸವ ಸಮಾರಂಭದ ಲೋಗೋವನ್ನು ಜುಲೈ 14 ರಂದು ಬಿಡುಗಡೆಗೊಳಿಸಲಾಯಿತು. ಒಂಟಿಕಟ್ಟೆ ಅಯ್ಯಪ್ಪ ಮಂದಿರದಲ್ಲಿ ನಡೆದ ಈ ಕಾರ್ಯಕ್ರಮವನ್ನು ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರಾಜೇಶ ರವರು ಲೋಗೋವನ್ನು ಬಿಡುಗಡೆ ಮಾಡಿ ಹಾಗೂ ಅಯ್ಯಪ್ಪ ಸೇವಾ ಸಮಿತಿಯ ಅಧ್ಯಕ್ಷ ಶಶಿಧರ ಭಂಡಾರಿ ಅವರು ಕರಪತ್ರವನ್ನು ಬಿಡುಗಡೆ ಮಾಡಿ ಸಂಪನ್ನಗೊಳಿಸಿದರು.

ಇದೇ ಸಂದರ್ಭದ ಉದ್ದೇಶ ಇಂದು ಅಯ್ಯಪ್ಪ ಮಂದಿರ ಸಮೀಪ ಉರೋಡಿ ಗುತ್ತು ಬರ್ಕೆದ ತಿರ್ತ ಕಂಡೊಡು ಒಂಟಿಕಟ್ಟೆ ಅಯ್ಯಪ್ಪ ಭಕ್ತರು, ಗಜಾನನ ಮಹಿಳಾ ಘಟಕ, ಏಕದಂತ ಗೆಳೆಯರ ಬಳಗ, ಸಿದ್ಧಿ ವಿನಾಯಕ ಫ್ರೆಂಡ್ಸ್ , ಬೆನಕ ಬ್ರದರ್ಸ್ , ಮತ್ತು ಗಜಾನನ ಭಜನಾ ಮಂಡಳಿಯ ಸದಸ್ಯರಿಂದ ಊರಿನವರಿಗೆ ಕೆಸರ್ದ ಗೊಬ್ಬು ಕಾರ್ಯಕ್ರಮ ನಡೆಯುತ್ತಿದೆ ಎಂದು ಒಂಟಿ ಕಟ್ಟೆ ಗಣೇಶೋತ್ಸವ ಸಮಿತಿಯ ಮನು ಎಸ್ ಆಚಾರ್ಯ ಅವರು ತಿಳಿಸಿರುತ್ತಾರೆ.

ಸಚಿತ್ರ ವರದಿ: ರಾಯಿ ರಾಜಕುಮಾರ್ ಮೂಡುಬಿದಿರೆ.