ಮಾಜಿ ಶಾಸಕರು, ಸಾಮಾಜಿಕ ಸೇವೆಯಲ್ಲಿ ಅಪಾರ ಸೇವೆಗೈದಿದ್ದ ಧುರೀಣರಾದ ಎ.ಜಿ. ಕೊಡ್ಗಿ ಅವರ ನಿಧನಕ್ಕೆ ತೀವ್ರ ಸಂತಾಪ ಸಲ್ಲಿಸುತ್ತೇನೆ.

ಅವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ. ಸಹಕಾರ ಹಾಗೂ ಕೃಷಿ ರಂಗದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಕೊಡ್ಗಿ ಅವರ ಸೇವೆ ಸಮಾಜಕ್ಕೆ ಅಪಾರ.

ಅವರ ಕುಟುಂಬ ವರ್ಗಕ್ಕೆ ನನ್ನ ಭಾವಪೂರ್ಣ ಶೃದ್ದಾಂಜಲ್ಲಿಯನ್ನು ವ್ಯಕ್ತಪಡಿಸುತ್ತೇನೆ.

ಬಿ. ರಮಾನಾಥ ರೈ

ಮಾಜಿ ಸಚಿವರು

ಉಪಾಧ್ಯಕ್ಷರು, ಕೆಪಿಸಿಸಿ


ಎ.ಜಿ. ಕೊಡ್ಗಿಅವರ ನಿಧನದ ಸುದ್ದಿ ತಿಳಿದು ವಿಷಾದವಾಯಿತು.- ಡಿ. ವೀರೇಂದ್ರ ಹೆಗ್ಗಡೆಯವರು

    ಮೂರನೆರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರಾಗಿ, ಶಾಸಕರಾಗಿ, ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷರಾಗಿ ಗ್ರಾಮೀಣ ಪ್ರದೇಶದ ಸರ್ವತೋಮುಖ ಪ್ರಗತಿಗೆ ಅವರು ವಿಶೇಷವಾಗಿ ಶ್ರಮಿಸಿದ್ದಾರೆ. ಅಮಾಸೆಬೈಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತಿ ಮನೆಗೂ ಸೋಲಾರ್ ದೀಪ ಅಳವಡಿಕೆ, ರಸ್ತೆಗಳ ಅಭಿವೃದ್ಧಿ, ಕೃಷಿಯಲ್ಲಿ ಪ್ರಗತಿಯೊಂದಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಗ್ರಾಮದ ಪ್ರಗತಿಗೆ ಅವರು ಪೂರ್ಣ ಸಹಕಾರ ನೀಡಿ ಪ್ರೋತ್ಸಾಹಿಸಿದ್ದಾರೆ.

    ಅವರ ದೇಶ ಪ್ರೇಮ, ಸಮಾಜಮುಖಿ ಚಿಂತನೆಗಳು, ರಾಜಕೀಯವಾಗಿ ಅವರು ತಳೆದ ದೃಢ ನಿಲುವುಗಳು ಪ್ರಶಂಸನೀಯವಾಗಿವೆ. ಹಿರಿಯ ನಾಗರಿಕರಾಗಿಯೂ, ನಮ್ಮ ಕ್ಷೇತ್ರದ ಅಭಿಮಾನಿ ಭಕ್ತರಾಗಿಯೂ ನನಗೆ ಅವರು ಹಲವು ವರ್ಷಗಳಿಂದ ಚಿರಪರಿಚಿತರು ಹಾಗೂ ಆತ್ಮೀಯರಾಗಿದ್ದಾರೆ. ಅವರ ಅನೇಕ ಕಾರ್ಯಕ್ರಮಗಳಿಗೆ ನಮ್ಮ ಕ್ಷೇತ್ರದ ವತಿಯಿಂದ ನೆರವು ನೀಡಿ ಪ್ರೋತ್ಸಾಹಿಸಿದ್ದೇವೆ.

    ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ ಅವರ ಅಗಲುವಿಕೆಯಿಂದ ಕುಟುಂಬ ವರ್ಗದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ.