ಮಗಳನ್ನು ಇರಿದು ಕೊಂದವನನ್ನು ಸ್ಥಳದಲ್ಲೇ ಬಡಿದು ಕೊಂದ ತಾಯಿಯನ್ನು ಬಂಧಿಸಿರುವ ಘಟನೆ ಬೆಂಗಳೂರಿನ ಸಾರಕ್ಕಿ ಉದ್ಯಾನದಲ್ಲಿ ನಡೆದಿದೆ. 

ದುರಂತ ಸಾವು ಕಂಡವರು ಗೊರಗುಂಟೆಪಾಳ್ಯದ 46ರ ಸುರೇಶ್ ಮತ್ತು ಶಾಖಾಂಬರಿ ನಗರದ 25ರ ಅನುಶಾ. ಇಬ್ಬರೂ ಈವೆಂಟ್ ಮ್ಯಾನೇಜ್ಮೆಂಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಮೊದಲು ಸಲಿಗೆಯಿಂದ ಇದ್ದ ಅನುಶಾ ಅಂತರ ಕಾಯ್ದುಕೊಂಡಳು. ಉದ್ಯಾನದಲ್ಲಿ ಕುಳಿತಿದ್ದಾಗ ಬಂದ ಸುರೇಶ್ ಚಾಕುವಿನಿಂದ ಅನುಶಾಳನ್ನು ಐದಾರು ಬಾರಿ ಇರಿದಿದ್ದಾನೆ. ಅಲ್ಲಿದ್ದ ತಾಯಿ ಗೀತಾ ಪಕ್ಕದಲ್ಲಿದ್ದ ಸಿಮೆಂಟ್ ಇಟ್ಟಿಗೆಯಿಂದ ಕೊಲೆಗಾರನ ತಲೆಗೆ ಹೊಡೆದು ಕೊಂದಿದ್ದಾಳೆ. ಜೆ. ಪಿ. ನಗರ ಪೋಲೀಸು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.