ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಜಿಯವರ ನೇತೃತ್ವದಲ್ಲಿ ಕೋವಿಡ್ ನಿಯಂತ್ರಣ ಹಾಗು ಲಸಿಕೆ 100  ಕೋಟಿಗೂ ಮೀರಿ ಡೋಸ್ ವಿತರಿಸಿ ಕೋವಿಡ್ ವಿರುದ್ಧ ಹೋರಾಟದಲ್ಲಿ ಭಾರತದ ಮಹತ್ತರ ಸಾಧನೆಯಾಗಿರುವ  ಹಿನ್ನೆಲೆಯಲ್ಲಿ ಬಿಜೆಪಿ ಮೂಡುಬಿದಿರೆ ಮಂಡಲದ ವತಿಯಿಂದ ಆರೋಗ್ಯ ಅಧಿಕಾರಿಗಳಾದ  ಡಾ.ಸುಜಯ್ ಭಂಡಾರಿ, ಡಾ.ಶಶಿಕಲಾ, ನೋಡಲ್ ಅಧಿಕಾರಿ ಸುಭಾಸ್ ಹಾಗು ವೈದ್ಯರುಗಳಿಗೆ, ಸಹಾಯಕರಿಗೆ ಅಭಿನಂದಿಸುವ ಕಾರ್ಯಕ್ರಮದಲ್ಲಿ  ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ. ಭಾಗವಹಿಸಿದರು. ಶಾಸಕರಾದ  ಉಮನಾಥ್ ಕೋಟ್ಯಾನ್, ಪ್ರಮುಖರಾದ  ಸುನಿಲ್ ಆಳ್ವ, ಕೆ.ಆರ್.ಪಂಡಿತ್, ಈಶ್ವರ್ ಕಟೀಲ್, ಬಾಹುಬಲಿ ಪ್ರಸಾದ್, ಕೃಷ್ಣರಾಜ್ ಹೆಗ್ಡೆ, ಪ್ರಸಾದ್ ಕುಮಾರ್, ಸುಚರಿತ ಶೆಟ್ಟಿ, ಮೇಘನಾಥ್ ಶೆಟ್ಟಿ, ಗೋಪಾಲ್ ಶೆಟ್ಟಿಗಾರ್, ಕೇಶವ ಕರ್ಕೇರ,ಪುರಸಭಾ ಸದಸ್ಯರು ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು.